ಅಧ್ಯಕ್ಷ ಸ್ಥಾನಕ್ಕೆ ನಡೆದ ಪೈಪೋಟಿಯಲ್ಲಿ ಎದುರಾಳಿ ಹಣಮಂತ ರಾಂಪುರ ಅವರನ್ನು ಮಲ್ಲಿಕಾರ್ಜುನ ಬಳ್ಳಾರಿ ಮಣಿಸಿದರು. ಚಲಾವಣೆಯಾದ 69 ಮತಗಳ ಪೈಕಿ ಮಲ್ಲಿಕಾರ್ಜುನ ಅವರಿಗೆ 56 ಮತಗಳು ಬಿದ್ದರೆ, ರಾಂಪುರ 13 ಮತಗಳಿಗೆ ತೃಪ್ತಿಪಟ್ಟರು. ಖಜಾಂಚಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಿರೇಮಠ 55 ಮತಗಳ ಪಡೆದರೆ, ಎದುರಾಳಿ ಆರ್.ಎಚ್.ಯಳಬಾವಿ 14 ಮತ ಪಡೆದರು. ರಾಜ್ಯ ಪರಿಷತ್ಗೆ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿಎಸ್.ವಿ.ಸತ್ಯರಡ್ಡಿ ಅವರಿಗೆ 56 ಮತ ಬಿದ್ದರೆ, ಮಂಜುನಾಥ ಬಂಡರಗಲ್ಲ 13 ಮತಗಳನ್ನು ಪಡೆದರು.