ನಿಗಮವು ಕಳೆದ ಮೇ 23ರಂದು ದೇಗುಲದ ಪ್ರಸ್ತಾವವನ್ನು ಪತ್ರ ಮುಖೇನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕಳುಹಿಸಿ ಅಭಿಪ್ರಾಯ ಕೇಳಿತ್ತು. ಆದರೆ, ಇದರ ಮರುದಿನವೇ ಉತ್ತರ ನೀಡಿರುವ ಪ್ರಾಧಿಕಾರವು, ನಿರ್ಮಾಣ ಮಾರ್ಗ ಬದಲಾವಣೆಯಿಂದ ಸಂಚಾರ ದಟ್ಟಣೆ, ಅಪಘಾತ ಹೆಚ್ಚಾಗುವ ಸಾಧ್ಯತೆ ಇದೆ. ತಾಂತ್ರಿಕವಾಗಿ ಈ ಬದಲಾವಣೆ ಸರಿಯಲ್ಲ ಎಂದು ಹೇಳಿದೆ.