ಕವಿ ಮೂಡ್ನಾಕೂಡು ಚಿನ್ನಸ್ವಾಮಿ, ‘ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹನುಮಂತನನ್ನು ದಲಿತ ಎಂದಿದ್ದರು. ಅವರು ಯಾವ ಉದ್ದೇಶದಿಂದ ಹೇಳಿದ್ದಾರೋ ಗೊತ್ತಿಲ್ಲ. ದೇವರನ್ನು ದಲಿತ ಎಂಬುದಾಗಿ ಕರೆದು ಅವಮಾನ ಮಾಡಿದ್ದಾರೆ ಎಂದು ಬ್ರಾಹ್ಮಣ ಸಮುದಾಯ ಈ ಆರೋಪ ಖಂಡಿಸಿ, ನ್ಯಾಯಾಲಯದ ಮೆಟ್ಟಿಲೇರಿದೆ. ದಲಿತ ಎಂಬುದಕ್ಕಾಗಿ ಆಂದೋಲನ ನಡೆಸಿದರೆ, ಆ ಸ್ಥಿತಿಯಲ್ಲೇ ಬದುಕುತ್ತಿರುವ ಅವರ ಪಾಡು ಹೇಗಿರಬೇಡ. ಇದು ಮೇಲು–ಕೀಳು, ಮಡಿ–ಮೈಲಿಗೆಯ ಪ್ರಶ್ನೆ’ ಎಂದರು.