‘ಒಟ್ಟು 12 ಕ್ಯಾಂಟೀನ್ಗಳಿಗೆ ಟೆಂಡರ್ ಆಗಿದ್ದು, 9 ಮಾತ್ರ ಆರಂಭವಾಗಿವೆ. 3 ಕ್ಯಾಂಟೀನ್ ಆರಂಭವಾಗದಿರುವುದು ಸಹ ನಷ್ಟಕ್ಕೆ ಕಾರಣವಾಗಿದೆ. ಅಲ್ಲದೆ ಧಾರವಾಡದಲ್ಲಿ ಅಡುಗೆ ಮನೆ ಆರಂಭಿಸದ ಕಾರಣ, ಹುಬ್ಬಳ್ಳಿಯಿಂದಲೇ ಅಲ್ಲಿಗೂ ಪೂರೈಕೆ ಮಾಡಲಾಗುತ್ತಿದ್ದು, ಸಾಗಣೆ ವೆಚ್ಚವನ್ನು ಹೆಚ್ಚುವರಿಯಾಗಿ ಭರಿಸಬೇಕಾಗಿದೆ’ ಎಂದು ಮಯೂರ್ ಆದಿತ್ಯ ರೆಸಾರ್ಟ್ ಸಿಇಒ ಹೇಮಲ್ ದೇಸಾಯಿ ತಿಳಿಸಿದರು.