ಕಾರ್ಯಕ್ರಮಕ್ಕೆ ಶಾಸಕ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು. ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ. ಎನ್.ನಂಜುಂಡೇಶ್ ಮಾತನಾಡಿ, ‘ನಮ್ಮ ಪರಂಪರೆ, ಸಂಸ್ಕೃತಿ ಇತಿಹಾಸದ ಭಾಗವಾಗಿರುವ ಹಬ್ಬ, ಉತ್ಸವ, ಜಾತ್ರಾ ಮಹೋತ್ಸವಗಳು ಜಾತ್ಯತೀತ ಮನೋಭಾವ ರೂಢಿಸಿಕೊಳ್ಳಲು ಸಹಕಾರಿ. ಸಮಾಜದ ಎಲ್ಲ ವರ್ಗದವರನ್ನೂ ಒಂದುಗೂಡಿಸಿ ಸ್ವಸ್ಥ ಸಮಾಜ ನಿರ್ಮಾಣ ಸಾಕಾರಗೊಳ್ಳಲು ಪ್ರೇರಣೆಯಾಗಿವೆ’ ಎಂದರು.