ಮೈಸೂರು, ಬಾಗಲಕೋಟೆ, ಸುರಪುರ, ಅಥಣಿ ಸೇರಿದಂತೆ ಆಂಧ್ರ ಪ್ರದೇಶದ ಅನೇಕ ನಗರಗಳಲ್ಲಿನ ಉಡುಪಿ ಹೋಟೆಲ್ ಹಾಗೂ ಇತರ ಕ್ಯಾಂಟೀನ್ಗಳಲ್ಲಿ ಕೆಲಸ ಮಾಡಿದ್ದಾರೆ. ವರ್ಷಕ್ಕೆ ಎರಡು ಬಾರಿ ತಮ್ಮ ಸ್ವಗ್ರಾಮಕ್ಕೆ ತೆರಳುತ್ತಿದ್ದ ಸದಾನಂದ ಶೆಟ್ಟಿಗೆ ಈ ಬಾರಿ ಲಾಕ್ ಡೌನ್ ಅಡ್ಡಿಯಾಗಿದೆ. ತಮ್ಮ ಸಂಬಳದಲ್ಲಿ ಮನೆ ಖರ್ಚಿಗೆಂದು ಪ್ರತಿ ತಿಂಗಳು ₹8 ಸಾವಿರ ಕಳುಹಿಸುತ್ತಿದ್ದರು. ಲಾಕ್ಡೌನ್ ಜಾರಿಯಿಂದ ಹೋಟೆಲ್ ಬಂದ್ ಆದ ಕಾರಣ ಕುಟುಂಬದವರಿಗೆ ಈ ಬಾರಿ ಹಣ ಕಳಿಸಲು ಸಾಧ್ಯವಾಗಿಲ್ಲ.