ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ಚಿಜ್‌: ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಅಭಿಪ್ರಾಯ

Last Updated 24 ಜನವರಿ 2019, 19:55 IST
ಅಕ್ಷರ ಗಾತ್ರ

ದಿನಪತ್ರಿಕೆ ಓದುವುದರಿಂದ ಜ್ಞಾನ

ಕ್ವಿಜ್‌ನಲ್ಲಿ ಕೇಳಿರುವ ಪ್ರಶ್ನೆಗಳು ಚೆನ್ನಾಗಿದ್ದವು. ಪ್ರತಿನಿತ್ಯ ದಿನಪತ್ರಿಕೆಗಳನ್ನು ಓದುವುದರಿಂದ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದಾಗಿದೆ. ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಡಲಾಯಿತು

ಧನ್ಯತಾ ಗೌಡ, ಯೂರೋ ಶಾಲೆ, ಚಿಮಿನಿ ಹಿಲ್ಸ್‌

***

ಹೊಸ ವಿಷಯ ತಿಳಿದೆವು

ಎಷ್ಟೋ ಗೊತ್ತಿರದ ವಿಷಯಗಳನ್ನು ಇಂದು ತಿಳಿದಿಕೊಂಡೆವು. ಮೊದಲ ಸಲ ಸ್ಪರ್ಧೆಗೆ ಬಂದಿದ್ದೇವೆ. ಹೇಗೆ ತಯಾರಾಗಬೇಕು ಎಂಬುವುದನ್ನು ಅರಿತುಕೊಂಡಿದ್ದೇವೆ. ಕ್ಷಿಜ್‌ ಮಾಸ್ಟರ್‌ ತುಂಬಾ ಚೆನ್ನಾಗಿ ನಡೆಸಿಕೊಟ್ಟರು. ನಮಗೆ ಪ್ರೋತ್ಸಾಹ ಮಾಡುತ್ತಿದ್ದರು

ಚಿರಾಗ್‌, ಸೇಂಟ್‌ ಜಾನ್‌ ಪ್ರೌಢ ಶಾಲೆ, ವಿಜಯನಗರ

***

ನಾವು ಇನ್ನಷ್ಟು ಓದಬೇಕಿತ್ತು

ಕ್ವಿಜ್‌ ಸ್ಪರ್ಧೆಗೆ ನಾವು ಇನ್ನು ಅಧ್ಯಯನಶೀಲರಾಗಬೇಕಿತ್ತು. ಕಾರ್ಯಕ್ರಮವನ್ನು ಉತ್ತಮವಾಗಿ ಆಯೋಜಿಸಲಾಗಿತ್ತು.

ಮೇಧಾ ಉಜಿರೆ, ಬಿ.ಜಿ.ಎಸ್‌ ನ್ಯಾಷನಲ್‌ ಪಬ್ಲಿಕ್‌ ಶಾಲೆ, ಹುಳಿಮಾವು

***

ಮಕ್ಕಳನ್ನು ಉತ್ತೇಜಿಸಬೇಕಿದೆ

ಮೊದಲ ಬಾರಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದಿದ್ದೇವೆ. ಮಕ್ಕಳನ್ನು ಹೇಗೆ ತಯಾರು ಮಾಡಬೇಕು ಎಂದು ಗೊತ್ತಾಗಿದೆ. ಮಕ್ಕಳನ್ನು ಇನ್ನೂ ಉತ್ತೇಜಿಸಬೇಕು. ಆಯೋಜನೆ ಉತ್ತಮವಾಗಿತ್ತು

ಜಯಾ ಸಿ.ಎಲ್‌., ಶಿಕ್ಷಕಿ, ಎಸ್‌.ಜೆ.ಆರ್‌ ಪಬ್ಲಿಕ್‌ ಶಾಲೆ,

***

ಸ್ಪರ್ಧೆ ಕಠಿಣ ಇತ್ತು

ಫೈನಲ್‌ಗೆ ಬರುತ್ತೇವೆ ಅಂದುಕೊಂಡಿರಲಿಲ್ಲ. ತುಂಬಾ ಖುಷಿ ಆಯಿತು. ಸ್ಪರ್ಧೆ ಕಷ್ಟ ಇತ್ತು. ನಾವು ಹೆಚ್ಚಿನ ತಯಾರಿ ಮಾಡಿಕೊಳ್ಳಬೇಕಿತ್ತು.

ಮ್ಯಾಥ್ಯೂ, ವಿದ್ಯಾರ್ಥಿ

***

ವಿದ್ಯಾರ್ಥಿಗಳಿಗೆ ಪ್ರೋತ್ಸಾಹ

ಪ್ರಜಾವಾಣಿ ಕ್ವಿಜ್‌ನಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿಯಾಗುವುದರ ಜೊತೆಗೆ ಜ್ಞಾನಮಟ್ಟವು ಅಧಿಕವಾಗುತ್ತದೆ. ಶಾಲಾ ಮಟ್ಟದಲ್ಲಿ ಕ್ವಿಜ್‌ಗಳನ್ನು ನಡೆಸುವುದರ ಮೂಲಕ ನಾವು ಕೂಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ.

ರಾಮಕೃಷ್ಣ ಭಟ್‌, ಶಿಕ್ಷಕ, ಲಿಟ್ಲ್‌ ರಾಕ್‌ ಇಂಡಿಯನ್‌ ಸ್ಕೂಲ್‌, ಬ್ರಹ್ಮಾವರ, ಉಡುಪಿ

***

ಗುಣಮಟ್ಟದ ಕಾರ್ಯಕ್ರಮ

ಕ್ವಿಜ್‌ನಲ್ಲಿ ಕೇಳಿದ ಪ್ರಶ್ನೆಗಳು ತೀರಾ ಕಷ್ಟವೂ ಇರಲಿಲ್ಲ, ತೀರಾ ಸುಲಭವೂ ಇರಲಿಲ್ಲ. ಒಟ್ಟಿನಲ್ಲಿ ಗುಣಮಟ್ಟದ ಕಾರ್ಯಕ್ರಮವಾಗಿತ್ತು.

ಮುನಿಕೃಷ್ಣ, ಶಿಕ್ಷಕ, ಮಾಂಟ್ರಿಯಲ್‌ ಇಂಗ್ಲಿಷ್‌ ಶಾಲೆ, ಹೊಸಕೋಟೆ

***

ಅರಿವು ಮೂಡುತ್ತದೆ

ನಾಲ್ಕು ವರ್ಷಗಳಿಂದ ನಮ್ಮ ಶಾಲೆಯ ವಿದ್ಯಾರ್ಥಿಗಳು ಪ್ರಜಾವಾಣಿ ಕ್ವಿಜ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಇದರಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಯಾವ ವಿಷಯಗಳ ಕಡೆಗೆ ಗಮನ ಹರಿಸಬೇಕೆಂಬುದರ ಬಗ್ಗೆ ಅರಿವು ಮೂಡುತ್ತದೆ.

ವೆಂಕಟೇಶ್‌ ವೈ.ಎನ್‌. ಕ್ಯಾಲಿಫೋರ್ನಿಯಾ ಪಬ್ಲಿಕ್‌ ಸ್ಕೂಲ್‌, ಕಾಮಾಕ್ಷಿಪಾಳ್ಯ, ಬೆಂಗಳೂರು

***
ಸಾಮಾನ್ಯ ಜ್ಞಾನ ಅಗತ್ಯ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಕಲಿಕೆಯಲ್ಲಿ ಮುಂದಿದ್ದರೆ ಸಾಲದು ಅವರಲ್ಲಿ ಸಾಮಾನ್ಯ ಜ್ಞಾನ ಹಾಗೂ ಕೌಶಲ ವೃದ್ಧಿಯಾಗಬೇಕು. ಇವೆರಡಕ್ಕೂ ಈ ಕ್ವಿಜ್‌ ಸಹಕಾರಿ.

ಲೋಕೇಶ್‌, ಸೇಂಟ್‌ ಡಾಮಿನಿಕ್ಸ್‌ ಶಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT