‘ಅಮೃತಸರದ ತಾರ್ಸಿಕ್ಕಾದ ಮುಚ್ಚಾಲ್ ಹಾಗೂ ತಾಂಗ್ರಾ ಗ್ರಾಮಗಳಲ್ಲಿ ಮೊದಲು ಈ ಪ್ರಕರಣ ಬೆಳಕಿಗೆ ಬಂದಿತು. ಬುಧವಾರ ರಾತ್ರಿ ಇಲ್ಲಿ ಒಟ್ಟು ಐದು ಮಂದಿ ಸತ್ತಿದ್ದರು. ಗುರುವಾರ ಸಂಜೆ ಮುಚ್ಚಾಲ್ನಲ್ಲಿ ಮತ್ತಿಬ್ಬರು ಹಾಗೂ ಅಮೃತಸರದ ಶ್ರೀ ಗುರು ರಾಮದಾಸ್ ಆಸ್ಪತ್ರೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದ. ಬಳಿಕ ಮುಚ್ಚಾಲ್ ಮತ್ತು ಬಟಾಲದಲ್ಲಿ ತಲಾ ಇಬ್ಬರು ಸತ್ತಿದ್ದರು’ ಎಂದು ಪಂಜಾಬ್ ಡಿಜಿಪಿ ದಿನಕರ್ ಗುಪ್ತಾ ಹೇಳಿದ್ದಾರೆ.