ಪೂರ್ವ ಚಂಪಾರಣ್ ಜಿಲ್ಲೆಯ ಪ್ರವಾಹ ಪೀಡಿತ ಗೋಬ್ರಿ ಹಳ್ಳಿಯ ಮನೆಯೊಂದರಲ್ಲಿದ್ದ ಗರ್ಭಿಣಿಗೆ ತಡರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿತು. ವಿಷಯ ತಿಳಿದ ಕೂಡಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದವರು, ಆಶಾ ಕಾರ್ಯಕತೆಯರೊಂದಿಗೆ ಸ್ಥಳಕ್ಕೆ ತೆರಳಿದರು. ಆ ಹೊತ್ತಿಗಾಗಲೇ ಹೆರಿಗೆ ನೋವಿನ ಪ್ರಮಾಣ ತೀವ್ರವಾಗಿತ್ತು. ಎನ್ಡಿಆರ್ಎಫ್ ಸದಸ್ಯರು, ಆಶಾ ಕಾರ್ಯಕರ್ತೆಯರ ನೆರವಿನೊಂದಿಗೆ ದೋಣಿಯಲ್ಲೇ ಹೆರಿಗೆ ಮಾಡಿಸಿದರು.