ಮನೆಯಲ್ಲಿ ಗುರುವಾರ ರಾತ್ರಿ ಹಂದಿ ಮಾಂಸದ ಅಡುಗೆ ಮಾಡಲಾಗಿತ್ತು. ಮನೆ ಮಂದಿ ಊಟ ಮಾಡಿದ ಬಳಿಕ, ಮಗ ದೇವಿಪ್ರಸಾದ್ ಅಡುಗೆಗೆ ವಿಷ ಬೆರೆಸಿಟ್ಟಿದ್ದರು. ಇದಕ್ಕೆ ಇನ್ನೊಬ್ಬ ಮಗ ಲೋಕೇಶ್ ಕೂಡಾ ಸಹಕಾರ ನೀಡಿದ್ದರು ಎನ್ನಲಾಗಿದೆ. ಬೆಳಿಗ್ಗೆ ಮಾಂಸದ ಅಡುಗೆ ಸೇವಿಸಿದ ತಂದೆ ವಾಂತಿ ಮಾಡಿಕೊಂಡು, ತೀವ್ರ ಅಸ್ವಸ್ಥಗೊಂಡಾಗ ಆಸ್ಪತ್ರೆಗೆ ಸಾಗಿಸಲಾಗಿತ್ತು. ಇದೀಗ ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.