‘ರಾಜ್ಯ ಮತ್ತು ಜಿಲ್ಲಾ ಯೋಜನೆಗಳ ಹೊರತಾಗಿಯೂ ಎಲ್ಲಾ ಇಲಾಖೆಗಳೂ ವಿಕೋಪ ನಿರ್ವಹಣೆಗಾಗಿಯೇ ಪ್ರತ್ಯೇಕ ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳಬೇಕು. ರಾಜ್ಯ ಕಾರ್ಯಕಾರಿ ಸಮಿತಿ ಮತ್ತು ಜಿಲ್ಲಾ ವಿಕೋಪ ನಿರ್ವಹಣಾ ಪ್ರಾಧಿಕಾರಗಳ ಬಹುತೇಕ ಸದಸ್ಯರು ಕೋವಿಡ್ ವಿರುದ್ಧದ ಹೋರಾಟದಲ್ಲಿ ಮೊದಲನೇ ಸಾಲಿನಲ್ಲೇ ಇದ್ದಾರೆ. ಆದರೂ ರಾಜ್ಯ ಸಮಿತಿ ಅಸಹಾಯಕ ಅಲ್ಲ. ಉಪಸಮಿತಿಗಳನ್ನು ರಚಿಸಿ ಯೋಜನೆ ಪರಿಷ್ಕರಿಸಬೇಕು’ ಎಂದು ಪೀಠ ಆದೇಶಿಸಿತು.