ಬಂಧಿತರಲ್ಲಿ ಎರ್ನಾಕುಳಂ ಮತ್ತು ತೃಪ್ಪೂಣಿತ್ತುರ ಪ್ರದೇಶದವರೇ ಹೆಚ್ಚು.ಎರ್ನಾಕುಳಂ ಗ್ರಾಮೀಣ ಪ್ರದೇಶದಿಂದ 75 ಮಂದಿ ಮತ್ತು ತೃಪ್ಪೂಣಿತ್ತುರದಿಂದ 51 ಮಂದಿಯಲ್ಲಿ ಬುಧವಾರ ರಾತ್ರಿಯಿಂದ ಗುರುವಾರವರೆಗೆ ಬಂಧಿಸಲಾಗಿದೆ. ಇವರು ಪತ್ತನಂತಿಟ್ಟ, ನಿಲಯ್ಕಲ್, ಪಂಪಾ, ಸನ್ನಿಧಾನಂ ಮೊದಲಾದ ಪ್ರದೇಶಗಳಲ್ಲಿ ಸಂಭವಿಸಿದ ಸಂಘರ್ಷದಲ್ಲಿ ಭಾಗವಹಿಸಿದವರೂ, ನಿಷೇಧಾಜ್ಞೆ ಉಲ್ಲಂಘಿಸಿದವರೂ ಆಗಿದ್ದಾರೆ.
ಹಿಂಸಾಚಾರದಲ್ಲಿ ಭಾಗಿಯಾಗಿದ್ದ 210 ಮಂದಿಯ ಚಿತ್ರಗಳನ್ನು ಪೊಲೀಸರು ಪ್ರಕಟಿಸಿದ್ದಾರೆ.ಇನ್ನೂ ಹೆಚ್ಚಿನ ಜನರ ಫೋಟೊ ಪ್ರಕಟ ಮಾಡುವುದಾಗಿ ಪೊಲೀಸರು ಹೇಳಿದ್ದಾರೆ.
ಏತನ್ಮಧ್ಯೆ, ಪೊಲೀಸರು ಪ್ರಕಟಿಸಿದ ಫೋಟೊಗಳಲ್ಲಿ ಪತ್ತನಂತಿಟ್ಟ ಎಆರ್ ಶಿಬಿರದಲ್ಲಿದ್ದ ಪೊಲೀಸ್ ಇಬ್ರಾಹಿಂಕುಟ್ಟಿಯ ಫೋಟೊ ಪ್ರಕಟವಾಗಿ ವಿವಾದವಾಗಿದೆ.ಫೋಟೊ ಪ್ರಕಟಿಸುವಾಗ ಸೈಬರ್ ವಿಭಾಗದವರ ಕಣ್ತಪ್ಪಿನಿಂದ ಈ ಚಿತ್ರ ಪ್ರಕಟವಾಗಿದೆ ಎಂದು ಪೊಲೀಸರುಸ್ಪಷ್ಟನೆ ನೀಡಿದ್ದಾರೆ.