ಪ್ಲಾಸ್ಟಿಕ್, ಚರ್ಮದ ಉತ್ಪನ್ನಗಳು, ರಬ್ಬರ್ ಸುಡುವುದರಿಂದ ವಾಯುಮಾಲಿನ್ಯ ವಿಪರೀತವಾಗುತ್ತಿದೆ. ಅಲ್ಲದೆ, ಈ ವಸ್ತುಗಳನ್ನು ತಯಾರಿಸುವ ಅನಧಿಕೃತ ಕೈಗಾರಿಕಾ ಘಟಕಗಳು ಮುಂದ್ಕ ಮತ್ತು ನೀಲ್ವಲ್ ಗ್ರಾಮದ ಕೃಷಿ ಭೂಮಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಈ ಗ್ರಾಮದ ನಿವಾಸಿಗಳಾದ ಸತೀಶ್ಕುಮಾರ್ ಮತ್ತು ಮಹಾವೀರ್ ಸಿಂಗ್ ಎಂಬುವರು ಎನ್ಜಿಟಿ ಮೊರೆ ಹೋಗಿದ್ದರು.