‘ರೈಲ್ವೆ ಹಳಿ ಸಮೀಪ ವ್ಯಕ್ತಿಯೊಬ್ಬನ ಶವ ಇರುವುದಾಗಿ ನಮಗೆ ಕರೆ ಬಂದಿತು. ಸ್ಥಳಕ್ಕೆ ತೆರಳಿದಾಗ ಸ್ಥಳೀಯರು ಮೃತನನ್ನು ಆಜಾದ್ ಎಂದು ಗುರುತಿಸಿ ಮಾಹಿತಿ ನೀಡಿದರು. ಆತನ ಗುಡಿಸಲಿನಲ್ಲಿ ಪರಿಶೀಲಿಸಿದಾಗ, ನಾಣ್ಯಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಇರಿಸಿ ಅದನ್ನು ಡಬ್ಬದೊಳಗೆ ಇಟ್ಟಿದ್ದು ಕಂಡುಬಂದಿತು. ಜತೆಗೆ ಬ್ಯಾಂಕ್ ದಾಖಲೆಗಳು, ಆಧಾರ್, ಪಾನ್ ಕಾರ್ಡ್ ಹಾಗೂ ಹಿರಿಯ ನಾಗರಿಕರ ಪತ್ರ ದೊರಕಿದವು. ರಾಜಸ್ಥಾನದಲ್ಲಿರುವ ಆತನ ಪುತ್ರ ಸುಖದೇವ್ನನ್ನು ಅಲ್ಲಿನ ಪೊಲೀಸರ ಮೂಲಕ ಸಂಪರ್ಕಿಸಲು ಯತ್ನಿಸಲಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.