ಪಲ್ನಾಡು ಪ್ರದೇಶದ ಆತ್ಮಕೂರುನಲ್ಲಿ ವೈಎಸ್ಆರ್ ಕಾಂಗ್ರೆಸ್ನವರು ನಡೆಸಿದ್ದರು ಎನ್ನಲಾದ ದಾಳಿಯಿಂದ ಮನೆಗಳನ್ನು ಕಳೆದುಕೊಂಡು, ನಿರಾಶ್ರಿತ ಶಿಬಿರಗಳಲ್ಲಿ ವಾಸಿಸುತ್ತಿರುವ 127 ಕುಟುಂಬದವರಿಗೆ ಬೆಂಬಲ ನೀಡಲು ಟಿಡಿಪಿ ನೇತೃತ್ವದಲ್ಲಿ ಈ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಅದರಲ್ಲಿ ಪಾಲ್ಗೊಳ್ಳಲು ನಾಯ್ಡು ಮತ್ತು ಅವರ ಪುತ್ರ ಎನ್. ಲೋಕೇಶ್ ಅವರು ಬುಧವಾರ ಮುಂಜಾನೆ ತೆರಳ
ಬೇಕಾಗಿತ್ತು. ಆದರೆ ಅಷ್ಟರೊಳಗೆ ಅವರ ಮನೆಯನ್ನು ಸುತ್ತುವರಿದ ಪೊಲೀಸರು ಇಬ್ಬರೂ ಮನೆಯಿಂದ ಹೊರಬರುವುದನ್ನು ತಡೆದರು.