ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕಾಶ್ಮೀರ: ಉಗ್ರರಿಂದ ನಾಗರಿಕನ ಹತ್ಯೆ

Last Updated 17 ನವೆಂಬರ್ 2018, 16:47 IST
ಅಕ್ಷರ ಗಾತ್ರ

ಶ್ರೀನಗರ:ದಕ್ಷಿಣ ಕಾಶ್ಮೀರದ ಸೋಫಿಯಾನ್‌ ಜಿಲ್ಲೆಯಲ್ಲಿ ಕಳೆದ ಗುರುವಾರ ಬಾಲಕನೊಬ್ಬನನ್ನು ಸಾಯಿಸಿದ್ದ ಉಗ್ರರು, ಶನಿವಾರ ಮತ್ತೊಬ್ಬ ನಾಗರಿಕನನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ.

ಹುಝೈಫ್‌ ಅಶ್ರಫ್‌ (19)ಅವರನ್ನು ದಕ್ಷಿಣ ಕಾಶ್ಮೀರದ ಹರ್ಮೈನ್‌ ಗ್ರಾಮದ ಬಳಿ ಹತ್ಯೆ ಕತ್ತುಸೀಳಿ ಹತ್ಯೆ ಮಾಡಲಾಗಿದೆ. ಅಶ್ರಫ್‌ರನ್ನು ಹತ್ಯೆ ಮಾಡುವುದಕ್ಕೂ ಮುನ್ನಮೂವರು ನಾಗರಿಕರನ್ನು ಉಗ್ರರು ಅಪಹರಿಸಿದ್ದರು.ನಂತರ ಮೂವರನ್ನು ಬಿಡುಗಡೆ ಮಾಡಿದರು.

ಇತ್ತೀಚೆಗಷ್ಟೇ, ಇದೇ ಜಿಲ್ಲೆಯ ನದೀಮ್‌ ಮಂಜೂರ್‌ ಎಂಬಾತನನ್ನು ಹಿಜ್ಬುಲ್‌ ಮುಜಾಹಿದೀನ್‌ ಸಂಘಟನೆ ಉಗ್ರರು ಅಪಹರಿಸಿ ಕೊಲೆ ಮಾಡಿದ್ದರು.

ಸೇನೆಗೆ ಮಾಹಿತಿ ನೀಡಿದ್ದಾನೆಂಬ ಶಂಕೆಯ ಮೇಲೆ ಕೊಲೆ ಮಾಡಲಾಗಿತ್ತು. ನದೀಮ್‌ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ವಿಡಿಯೊ ತುಣಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT