ದೆಹಲಿಯ ಮಾಜಿ ಮುಖ್ಯಮಂತ್ರಿ ಸಾಹೀಬ್ ಸಿಂಗ್ ವರ್ಮಾ ಪುತ್ರ, ಸಂಸದ ಪರ್ವೇಶ್ ವರ್ಮಾ ಗುರುವಾರ ವಿಡಿಯೊವೊಂದನ್ನು ಟ್ವೀಟಿಸಿದ್ದು, ಕೋವಿಡ್-19 ಪಿಡುಗು ಕಾಲದಲ್ಲಿ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಉಲ್ಲಂಘಿಸಿ ಯಾವುದಾದರೂ ಧರ್ಮಗಳು ಈ ರೀತಿ ಮಾಡುತ್ತವೆಯೇ ಎಂದಿದ್ದರು. ಅದೇ ವೇಳೆ ಮುಸ್ಲಿಂ ಪಂಡಿತರ ಸಂಬಳ ಏರಿಕೆ ಮಾಡಿದ್ದಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಕಿಡಿ ಕಾರಿದ ವರ್ಮಾ, ಅವರ ಸಂಬಳ ಕಡಿಮೆ ಮಾಡುವಂತೆ ಸವಾಲು ಹಾಕಿದ್ದರು.