ಕರ್ನಾಟಕದ ಉಲ್ಲೇಖ
ಚುನಾವಣೆಯಲ್ಲಿ ಯಾವುದೇ ಒಂದು ಪಕ್ಷಕ್ಕೆ ಬಹುಮತ ಲಭಿಸದೆ, ಅತಂತ್ರ ಸ್ಥಿತಿ ನಿರ್ಮಾಣವಾದಾಗ ಸ್ಪೀಕರ್ ಜವಾಬ್ದಾರಿ ಹೆಚ್ಚಾಗುತ್ತದೆ. ಕರ್ನಾಟಕದಲ್ಲಿ ಈಚೆಗೆ ಇಂಥ ಸ್ಥಿತಿ ನಿರ್ಮಾಣವಾಗಿ, ಅನರ್ಹತೆಯ ಅರ್ಜಿಯ ಇತ್ಯರ್ಥವನ್ನೂ ಸ್ಪೀಕರ್ ವಿಳಂಬ ಮಾಡಿದ್ದರು. ಶಾಸಕರ ಅನರ್ಹತೆಯ ಅರ್ಜಿಯನ್ನು ಗರಿಷ್ಠ ಮೂರು ತಿಂಗಳೊಳಗೆ ಇತ್ಯರ್ಥಪಡಿಸಲೇಬೇಕು. ಶಾಸಕರು ಪಕ್ಷವಿರೋಧಿ ಚಟುವಟಿಕೆ ನಡೆಸಿ, 10ನೇ ಪರಿಚ್ಛೇದದ ಅಡಿ ಅನರ್ಹತೆಗೆ ಅರ್ಹರಾಗಿದ್ದಾರೆ ಎಂದಾದರೆ, ಅಂಥ ಶಾಸಕರನ್ನು ಒಂದು ದಿನವೂ ಮುಂದುವರಿಸಲು ಬಿಡಬಾರದು’ ಎಂದು ಪೀಠ ಹೇಳಿದೆ.