ಲಾಲು ಪ್ರಸಾದ್ ಅನಾರೋಗ್ಯ ಪೀಡಿತರಾಗಿದ್ದು, ಚಿಕಿತ್ಸೆ ಅಗತ್ಯವಿರುವುದರಿಂದ ಜಾಮೀನು ಅವಧಿಯನ್ನು ಮೂರು ತಿಂಗಳು ವಿಸ್ತರಿಸಬೇಕು ಎಂದು ಲಾಲು ಪರ ವಕೀಲರು ಕೋರಿದರು. ಆದರೆ, ಸಿಬಿಐ ಪರ ವಕೀಲ ರಾಜೀವ್ ಸಿನ್ಹಾ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಲಾಲು ಅವರ ಚಿಕಿತ್ಸೆಗಾಗಿ ಈಗಾಗಲೇ 12 ವಾರಗಳ ಕಾಲಾವಕಾಶ ನೀಡಲಾಗಿದೆ. ಮತ್ತೆ ಅವಧಿ ವಿಸ್ತರಿಸುವುದು ಸರಿಯಲ್ಲ ಎಂದರು.