ಸಭೆ ರದ್ದುಗೊಳಿಸಿರುವ ಜೈಶಂಕರ್ ಅವರ ನಡೆಯ ಕುರಿತು ಅಲ್ಲಿನ ಮಾಧ್ಯಮಗಳೊಂದಿಗೆ ಮಾತನಾಡಿರುವ ಪ್ರಮೀಳಾ ಜೈಪಾಲ್, ‘ಭಾರತದ ಸರ್ಕಾರ ಅಭಿಪ್ರಾಯ ಬೇಧಕ್ಕೆ ಮನ್ನಣೆ ನೀಡುವುದಿಲ್ಲ ಎಂಬುದಕ್ಕೆ ಈ ಬೆಳಣಿಗೆಯೂ ಸಾಕ್ಷಿಯಾಗಿದೆ. ಈ ಕ್ಷಣಕ್ಕೆ ಚರ್ಚೆ ಮುಖ್ಯವಾಗಬೇಗಿತ್ತು. ತಂಡದಲ್ಲಿ ಯಾರಿದ್ದಾರೆ, ಯಾರಿಲ್ಲ ಎಂಬುದಲ್ಲ. ಇದು ಸಣ್ಣತನ,‘ ಎಂದು ಅವರು ಹೇಳಿಕೊಂಡಿದ್ದಾರೆ.