‘ಜನರ ಬಳಿ ದುಡ್ಡೇ ಇಲ್ಲ. ಹೀಗಾಗಿ ದೇಶದಲ್ಲಿ ಬೇಡಿಕೆ ಕುಸಿದಿದೆ. ಆದಾಯ ತೆರಿಗೆಯನ್ನು ತೆಗದುಹಾಕಿ, ಆರ್ಥಿಕ ಬೆಳವಣಿಗೆಗೆ ವೇಗ ಸಿಗುತ್ತದೆ. ನೀವು 2030ರಲ್ಲಿ ಆರ್ಥಿಕ ಮಹಾನ್ ಶಕ್ತಿಯಾಗಬೇಕು ಅಂದರೆ, ಜಿಡಿಪಿ ವೃದ್ಧಿ ದರ ಶೇ 10ರಷ್ಟು ಇರಬೇಕು. ಪಿ.ವಿ.ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ಅಂದಿನ ಹಣಕಾಸು ಸಚಿವ ಮನಮೋಹನ್ ಸಿಂಗ್ ಆರ್ಥಿಕ ನೀತಿಗಳನ್ನು ಬದಲಿಸಿದ್ದರು. ಆನಂತರ ನಮ್ಮ ಜಿಡಿಪಿ ವೃದ್ಧಿ ಶೇ 8ರಷ್ಟು ಇತ್ತು. ಆದರೆ, ಆನಂತರ ಅದನ್ನು ಮತ್ತಷ್ಟು ವೃದ್ಧಿಸಲು ನಾವು ಏನನ್ನೂ ಮಾಡಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.