‘ಗಲ್ವಾನ್ ಕಣಿವೆಯಿಂದ ಬರುತ್ತಿರುವ ವರದಿಗಳು ಆಘಾತಕಾರಿ. ಸಂಘರ್ಷ ತಣ್ಣಗಾಗಿಸುವ ಪ್ರಯತ್ನಗಳ ನಡುವೆಯೂ ನಮ್ಮ ಯೋಧರೇಕೆ ಜೀವ ಕಳೆದುಕೊಳ್ಳಬೇಕಾಯಿತು? ದೇಶದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಚೀನಾ ಜತೆಗಿನ ಗಡಿ ಸಂಘರ್ಷಕ್ಕೆ ಸಂಬಂಧಿಸಿದ ಸ್ಪಷ್ಟ ಚಿತ್ರಣವನ್ನು ಪ್ರಧಾನಿಯವರು ಹಾಗೂ ರಕ್ಷಣಾ ಸಚಿವರು ದೇಶದ ಜನರ ಮುಂದಿಡಬೇಕು’ ಎಂದು ದೇವೇಗೌಡ ಟ್ವೀಟ್ ಮಾಡಿದ್ದಾರೆ.