ಭೋಪಾಲ್: ನಿರ್ದಿಷ್ಟ ದಾಳಿ ನಡೆದು ಎರಡು ವರ್ಷ ಕಳೆದರೂ ಎನ್ಡಿಎ ಸರ್ಕಾರ ಇನ್ನೂ ಅದರ ಬಗ್ಗೆ ಯಾಕೆ ಟಾಂ ಟಾಂ ಮಾಡುತ್ತಿದೆ ಎಂದು ಮಾಧ್ಯಮ ಪ್ರತಿನಿಧಿಯೊಬ್ಬರ ಪ್ರಶ್ನೆಗೆ ರಕ್ಷಣಾ ಸಚಿವೆ ನಿರ್ಮಲಾ ಖಡಕ್ ಉತ್ತರನೀಡಿದ್ದಾರೆ.
ಶುಕ್ರವಾರ ಭೋಪಾಲ್ನಲ್ಲಿ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ಪತ್ರಕರ್ತರೊಬ್ಬರು 2016ರಲ್ಲಿ ನಡೆದ ನಿರ್ದಿಷ್ಟ ದಾಳಿ ಬಗ್ಗೆ ಎನ್ಡಿಎ ಸರ್ಕಾರ ಇನ್ನೂ ಮಾತನಾಡುವುದನ್ನು ನಿಲ್ಲಿಸಿಲ್ಲ ಎಂದು ವ್ಯಂಗ್ಯದ ಪ್ರಶ್ನೆ ಕೇಳಿದ್ದರು.ಇದಕ್ಕೆ ಉತ್ತರಿಸಿದ ಸಚಿವೆ ನಿರ್ಮಲಾ, ನೀವು ಈ ರೀತಿ ವ್ಯಂಗ್ಯವಾಗಿ ಕೇಳಿದ್ದು ನನಗೆ ನೋವುಂಟು ಮಾಡಿದೆ. ನೀವು ಬಿನ್ಬಜಾಯೆ (ಟಾಂ ಟಾಂ ಹೊಡೆಯುವುದು) ಎಂಬ ಪದ ಬಳಸಿದಿರಿ. ನನಗೆ ಹಿಂದಿ ಅರ್ಥವಾಗುತ್ತದೆ ಎಂದಿದ್ದಾರೆ.