ಪಾಕ್ ಸಂಸತ್ತಿನಜಂಟಿ ಅಧಿವೇಶನದಲ್ಲಿ ಅಭಿನಂದನ್ ಅವರನ್ನು ವಾಘಾ ಗಡಿಯ ಮೂಲಕವೇ ಹಸ್ತಾಂತರಿಸಲಾಗುವುದು ಎಂದು ಪಾಕ್ ಸರ್ಕಾರ ಹೇಳಿತ್ತು.ಇಸ್ಲಾಮಾಬಾದ್ನಿಂದ ದೆಹಲಿಗೆ ವಾಯುಪಡೆಯವಿಶೇಷ ವಿಮಾನದಲ್ಲಿ ಕರೆತಂದು ಮಾಧ್ಯಮ ಸಂವಾದ ಮತ್ತು ವೈದ್ಯಕೀಯ ತಪಾಸಣೆಗೆ ಕರೆದೊಯ್ಯಬೇಕು ಎನ್ನುವುದು ಭಾರತದ ಇಚ್ಛೆಯಾಗಿತ್ತು. ಅಭಿನಂದನ್ ಕರೆತರಲು ಹೊರಟಿರುವ ಅಧಿಕಾರಿಗಳ ಪಟ್ಟಿಯನ್ನೂ ಭಾರತ ಸರ್ಕಾರ ಪಾಕಿಸ್ತಾನಕ್ಕೆ ನೀಡಿತ್ತು. ತೆರೆದ ಬಯಲಿನಲ್ಲಿ ಮಾಧ್ಯಮ ಪ್ರತಿನಿಧಿಗಳು ಅಭಿನಂದನ್ರನ್ನು ಪ್ರಶ್ನಿಸುವುದು, ವಿಚಾರಣೆ ಮಾಡುವುದು ಭಾರತ ಸರ್ಕಾರಕ್ಕೆ ಇಷ್ಟವಿರಲಿಲ್ಲ ಎಂದು ವರದಿ ತಿಳಿಸಿದೆ.