ಹೈದರಾಬಾದ್: ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್ಮೋಹನ್ ರೆಡ್ಡಿ ಅವರು ತನ್ನ ಪ್ರಮಾಣವಚನ ಸಮಾರಂಭಕ್ಕೆ ಚಂದ್ರಬಾಬುನಾಯ್ಡು ಅವರ ರಾಜಕೀಯ ವಿರೋಧಿ ಎನ್ನಲಾದ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ (ಕೆಸಿಆರ್) ಅವರನ್ನು ಆಹ್ವಾನಿಸಿದ್ದು, ನೆರೆ ರಾಜ್ಯದ ಜತೆಗೆ ಉತ್ತಮ ಬಾಂಧವ್ಯದ ಸೂಚನೆ ನೀಡಿದ್ದಾರೆ.