ಜೆಎನ್ಯುಟಿಎಕಾರ್ಯಕಾರಿ ಸಮಿತಿಯ 13 ಸದಸ್ಯರು ಶಾಸ್ತ್ರಿಭವನದಲ್ಲಿ ಮಾನವ ಸಂಪನ್ಮೂಲ ಸಚಿವಾಲಯದ ಪ್ರತಿನಿಧಿಗಳನ್ನು (ಎಂಎಚ್ಆರ್ಡಿ) ಭೇಟಿ ಮಾಡಿ, ಹಾಸ್ಟೆಲ್ ಶುಲ್ಕ ಏರಿಕೆ ಮಾಡದೆ ಬೇರೇನೂ ಉಪಾಯವಿಲ್ಲ ಎಂದು ಉಲ್ಲೇಖಿಸಿರುವ ನಿವೇದನೆಯನ್ನು ಸಲ್ಲಿಸಿದೆ. ಸದ್ಯ ಉಪಕುಲಪತಿಯವರು ಕಚೇರಿಯಲ್ಲಿ ಇಲ್ಲದೇ ಇರುವ ಕಾರಣ ವಿಶ್ವವಿದ್ಯಾಲಯದ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ. ಅದೇ ವೇಳೆ ಹಣಕಾಸಿನ ಅವ್ಯವಸ್ಥೆ ಮತ್ತು ಅನಗತ್ಯ ಖರ್ಚುಗಳು ಇಲ್ಲಿವೆ ಎಂದು ಶಿಕ್ಷಕರ ಸಮಿತಿ ದೂರಿದೆ.