ಅಧಿಕಾರದ ಚುಕ್ಕಾಣಿಗಾಗಿ ರಾಜಕೀಯ ಜಿದ್ದಾಜಿದ್ದಿ ನಡೆಯುತ್ತಿದ್ದ ಹೊತ್ತಿನಲ್ಲೇ ಹೊರಬಿದ್ದ ಇಂಥದ್ದೊಂದು ಪತ್ರ, ಬಿಜೆಪಿ ಸರ್ಕಾರ ರಚಿಸುವುದು ಖಚಿತ ಎಂಬ ಅಭಿಪ್ರಾಯ ಮೂಡುವಂತೆ ಮಾಡಿತ್ತು. ಕೊನೆಗೆ ಡಿಜಿಪಿ ನೀಲಮಣಿ ರಾಜು, ‘ಅದು ನಕಲಿ ಪತ್ರ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಗುರುವಾರ ಭದ್ರತಾ ಕ್ರಮ ಕೈಗೊಳ್ಳುವ ಕುರಿತು ನನ್ನ ಕಚೇರಿಯಿಂದ ಯಾವುದೇ ಪತ್ರ ಹೋಗಿಲ್ಲ’ ಎಂದು ಸ್ಪಷ್ಟಪಡಿಸಿದರು.