ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತಾಬ್ ಬಚ್ಚನ್‌ಗೆ ನೋಟಿಸ್ ನೀಡಿದ ದೆಹಲಿ ಬಾರ್ ಕೌನ್ಸಿಲ್

Last Updated 2 ನವೆಂಬರ್ 2018, 6:00 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ವಕೀಲರ ಸಂಘವು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಎವರೆಸ್ಟ್ ಮಸಾಲ, ಯುಟ್ಯೂಬ್ ಮತ್ತು ಮಾಧ್ಯಮ ಸಂಸ್ಥೆಯೊಂದಕ್ಕೂ ನೋಟಿಸ್ ನೀಡಲಾಗಿದೆ. ವಕೀಲರ ಉಡುಗೆಗಳನ್ನು ಬಳಸುವ ಮೊದಲು ತೆಗೆದುಕೊಳ್ಳಬೇಕಾದ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಂಡಿಲ್ಲ. ಪೂರ್ವಾಪರ ವಿವೇಚನೆಯಿಲ್ಲದೆ ಜಾಹೀರಾತು ಪ್ರಸಾರ ಮಾಡಿದ ಸಂಸ್ಥೆಗಳೂ ತಪ್ಪು ಮಾಡಿದೆ ಎಂದು ವಕೀಲರ ಸಂಘ ದೂರಿದೆ.

‘ವಕೀಲರ ಉಡುಗೆಗಳನ್ನು ಜಾಹೀರಾತಿಗೆ ಬಳಸುವ ಮೊದಲು ನೀವು ಅಗತ್ಯ ಮುನ್ನೆಚ್ಚರಿಕೆ ವಹಿಸಿಲ್ಲ. ಅಧಿಕಾರ ಮತ್ತು ವಿವೇಚನೆ ಇಲ್ಲದೆಜಾಹೀರಾತು ನಿರ್ಮಿಸಿ, ಪ್ರಸಾರ ಮಾಡಿರುವ ನಿಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. ಇಂಥಎಲ್ಲ ಜಾಹೀರಾತುಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನುಈ ಕೂಡಲೇ ನಿಲ್ಲಿಸಬೇಕು. ಬಾರ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ದೇಶದ ಇತರೆಲ್ಲ ವಕೀಲರ ಸಂಘಗಳಿಗೆ ಇನ್ನು ಮುಂದೆ ವಕೀಲರ ಉಡುಗೆಗೆ ಅಗೌರವ ತೋರಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಬೇಕು’ ಎಂದು ಜಾಹೀರಾತಿನ ಪಾತ್ರಧಾರಿ ಮತ್ತು ನಿರ್ಮಾಣ ಸಂಸ್ಥೆಯನ್ನುಒತ್ತಾಯಿಸಲಾಗಿದೆ. 10 ದಿನಗಳ ಒಳಗೆ ನೋಟಿಸ್‌ಗೆ ಉತ್ತರ ನೀಡಬೇಕು ಎಂದು ತಿಳಿಸಲಾಗಿದೆ.

‘ಎವೆರೆಸ್ಟ್‌ ಮಸಾಲಾ’ಗಾಗಿ ನಿರ್ಮಿಸಿದ ಈವಿವಾದಾತ್ಮಕ ಜಾಹೀರಾತಿನಲ್ಲಿ ಅಮಿತಾಭ್ ಬಚ್ಚನ್ ಡ್ರೆಸ್ಸಿಂಗ್‌ ರೂಂನಲ್ಲಿ ವಕೀಲರ ಪಾತ್ರ ಧರಿಸಿ ಕುಳಿತಿರುತ್ತಾರೆ. ಇಬ್ಬರು ಕಿರಿಯ ಕಲಾವಿದರು,ಕೈದಿಯ ವೇಷದಲ್ಲಿರುವ ಒಬ್ಬ ಮತ್ತು ಪೊಲೀಸ್ ವೇಷದಲ್ಲಿರುವ ಮತ್ತೊಬ್ಬಡ್ರೆಸ್ಸಿಂಗ್‌ ರೂಂಗೆ ಹೋಗಿ ಅಮಿತಾಭ್ ಅವರಿಗೆ ಪಾವ್ ಭಾಜಿ ಕೊಡುತ್ತಾರೆ. ಊಟ ಮುಗಿದ ನಂತರ ಅಮಿತಾಭ್ ತಿನಿಸನ್ನು ಮತ್ತು ಅದನ್ನು ತಯಾರಿಸಲು ಬಳಸಿದ ಮಸಾಲೆಯನ್ನು ಹೊಗಳುತ್ತಾರೆ. ವಕೀಲರ ವೇಷದಲ್ಲಿರುವ ನಟ ಆ ವೃತ್ತಿಯ ಘನತೆಗೆ ತಕ್ಕಂತೆ ವರ್ತಿಸಿಲ್ಲ ಎಂದು ವಕೀಲರ ಸಂಘ ಆಕ್ಷೇಪಿಸಿದೆ.

ಅಮಿತಾಭ್ ಈ ಹಿಂದೆಯೂ ಇಂಥದ್ದೊಂದು ವಿವಾದದಲ್ಲಿ ಸಿಲುಕಿದ್ದರು. ಜ್ಯುವೆಲ್ಲರಿ ಕಂಪನಿಯೊಂದರ ಜಾಹೀರಾತಿಗಾಗಿ ಮಗಳು ಶ್ವೇತಾ ಬಚ್ಚನ್ ಜೊತೆಗೂಡಿ ನಟಿಸಿದ್ದರು. ಬ್ಯಾಂಕ್ ನೌಕರರನ್ನು ಕೆಟ್ಟದಾಗಿ ತೋರಿಸುವ ಈ ಜಾಹೀರಾತನ್ನು ಹಿಂಪಡೆಯದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ಬ್ಯಾಂಕ್ ನೌಕರರ ಸಂಘಟನೆಗಳು ಬೆದರಿಕೆ ಹಾಕಿದ್ದವು. ಜಾಹೀರಾತು ನಿರ್ಮಿಸಿದ ಕಂಪನಿಯಿಂದ ಯಾವುದೇ ಚಿನ್ನಾಭರಣ ಖರೀದಿಸದಂತೆ ಬ್ಯಾಂಕ್ ನೌಕರರ ಸಂಘಟನೆಗಳುಟ್ವಿಟರ್ ಮೂಲಕ ಕರೆ ನೀಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT