<p><strong>ಮುಂಬೈ: </strong>ತಮಗೆ ಕೊರೊನಾ ವೈರಸ್ ಸೋಂಕು ತಗುಲಲು ತಮ್ಮ ಅಜಾಗರೂಕ ವರ್ತನೆಯೇ ಕಾರಣ ಎಂದು ಮಹಾರಾಷ್ಟ್ರದ ವಸತಿ ಸಚಿವ ಜಿತೇಂದ್ರ ಅವದ್ ಸ್ವತಃ ತಮ್ಮನ್ನು ದೂಷಿಸಿಕೊಂಡಿದ್ದಾರೆ.</p>.<p>ಸೋಂಕ ತಗುಲಿ, ಮೇ ತಿಂಗಳ ಹಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವದ್, ‘ನನ್ನನ್ನು ಎರಡು ದಿನಗಳವರೆಗೆ ವೆಂಟಿಲೇಟರ್ ವ್ಯವಸ್ಥೆಯಲ್ಲಿ ಇರಿಸಲಾಗಿತ್ತು,’ ಎಂದು ತಿಳಿಸಿದ್ದಾರೆ.</p>.<p>‘ನನ್ನ ಅಜಾಗರೂಕ ನಡವಳಿಕೆಗಳಿಂದಲೇ ಸೋಂಕು ತಗುಲಿತು. ನಾನು ಜನರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಅದಕ್ಕಾಗಿಯೇ ನಾನು ಕೋವಿಡ್ನ ಜಾಲಕ್ಕೆ ಸಿಲುಕಿದೆ,’ ಎಂದು ಎನ್ಸಿಪಿ ನಾಯಕರೂ ಆಗಿರುವ ಅವದ್ ಬುಧವಾರ ಆನ್ಲೈನ್ ಸಮಾಲೋಚನೆಯೊಂದರಲ್ಲಿ ಹೇಳಿಕೊಂಡರು.</p>.<p>ಥಾಣೆಯ ಉಸ್ತುವಾರಿ ಸಚಿವರಾಗಿದ್ದ ಅವದ್, ಕೊರೊನಾ ವೈರಸ್ ಸಾಂಕ್ರಾಮಿಕಗೊಳ್ಳುತ್ತಿದ್ದ ಆರಂಭದ ದಿನಗಳಲ್ಲಿ ಜನರಿಗೆ ಪರಿಹಾರ ಒದಗಿಸುವ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು.</p>.<p>‘ನನ್ನ ಮನೋಬಲದ ಮೂಲಕ ನಾನು ಈ ಕಾಯಿಲೆಯಿಂದ ಪಾರಾಗಿ ಬಂದೆ. ಕೊನೆಯ ಎರಡು ವಾರಗಳಲ್ಲಿ ನಾನು ಅತಿ ವೇಗವಾಗಿ ಚೇತರಿಸಿಕೊಂಡೆ,’ ಎಂದು ಅವರು ತಿಳಿಸಿದರು.</p>.<p>ಮಹಾರಾಷ್ಟ್ರ ಕೇಡರ್ನ ಸೋಂಕಿತ ಐಎಎಸ್ ಅಧಿಕಾರಿ ಸೇರಿದಂತೆ ಇತರ ಸೋಂಕಿತರಿಗೆ ಹೋಲಿಸಿಕೊಂಡರೆ, ಶೀಘ್ರ ಗುಣಮುಖರಾದ ತಮ್ಮನ್ನು ಅದೃಷ್ಟಶಾಲಿ ಎಂದು ಅವದ್ ಬಣ್ಣಿಸಿದ್ದಾರೆ. ಇತರ ಸೋಂಕಿತರ ಚಿಕಿತ್ಸೆಗೆ ವಿದೇಶದಿಂದ ಔಷಧಗಳನ್ನು ತರಿಸಲಾಯಿತು. ಪ್ಲಾಸ್ಮಾ ತೆರಪಿ ಮಾಡಲಾಯಿತು ಎಂದು ಅವರು ಹೇಳಿದರು.</p>.<p>ಭಾರಿ ಪ್ರಮಾಣದಲ್ಲಿ ಕುಸಿದಿದ್ದ ತಮ್ಮ ಹಿಮೋಗ್ಲೋಬಿನ್ ಮಟ್ಟವು ಸದ್ಯ ಏರಿಕೆಯಾಗಿದೆ. ಅಲ್ಲದೆ, ಆಹಾರದ ವಿಚಾರದಲ್ಲಿ ಈಗ ಅತ್ಯಂತ ಎಚ್ಚರಿಕೆಯಿಂದ ಇರುವುದಾಗಿಯೂ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ: </strong>ತಮಗೆ ಕೊರೊನಾ ವೈರಸ್ ಸೋಂಕು ತಗುಲಲು ತಮ್ಮ ಅಜಾಗರೂಕ ವರ್ತನೆಯೇ ಕಾರಣ ಎಂದು ಮಹಾರಾಷ್ಟ್ರದ ವಸತಿ ಸಚಿವ ಜಿತೇಂದ್ರ ಅವದ್ ಸ್ವತಃ ತಮ್ಮನ್ನು ದೂಷಿಸಿಕೊಂಡಿದ್ದಾರೆ.</p>.<p>ಸೋಂಕ ತಗುಲಿ, ಮೇ ತಿಂಗಳ ಹಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವದ್, ‘ನನ್ನನ್ನು ಎರಡು ದಿನಗಳವರೆಗೆ ವೆಂಟಿಲೇಟರ್ ವ್ಯವಸ್ಥೆಯಲ್ಲಿ ಇರಿಸಲಾಗಿತ್ತು,’ ಎಂದು ತಿಳಿಸಿದ್ದಾರೆ.</p>.<p>‘ನನ್ನ ಅಜಾಗರೂಕ ನಡವಳಿಕೆಗಳಿಂದಲೇ ಸೋಂಕು ತಗುಲಿತು. ನಾನು ಜನರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಅದಕ್ಕಾಗಿಯೇ ನಾನು ಕೋವಿಡ್ನ ಜಾಲಕ್ಕೆ ಸಿಲುಕಿದೆ,’ ಎಂದು ಎನ್ಸಿಪಿ ನಾಯಕರೂ ಆಗಿರುವ ಅವದ್ ಬುಧವಾರ ಆನ್ಲೈನ್ ಸಮಾಲೋಚನೆಯೊಂದರಲ್ಲಿ ಹೇಳಿಕೊಂಡರು.</p>.<p>ಥಾಣೆಯ ಉಸ್ತುವಾರಿ ಸಚಿವರಾಗಿದ್ದ ಅವದ್, ಕೊರೊನಾ ವೈರಸ್ ಸಾಂಕ್ರಾಮಿಕಗೊಳ್ಳುತ್ತಿದ್ದ ಆರಂಭದ ದಿನಗಳಲ್ಲಿ ಜನರಿಗೆ ಪರಿಹಾರ ಒದಗಿಸುವ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು.</p>.<p>‘ನನ್ನ ಮನೋಬಲದ ಮೂಲಕ ನಾನು ಈ ಕಾಯಿಲೆಯಿಂದ ಪಾರಾಗಿ ಬಂದೆ. ಕೊನೆಯ ಎರಡು ವಾರಗಳಲ್ಲಿ ನಾನು ಅತಿ ವೇಗವಾಗಿ ಚೇತರಿಸಿಕೊಂಡೆ,’ ಎಂದು ಅವರು ತಿಳಿಸಿದರು.</p>.<p>ಮಹಾರಾಷ್ಟ್ರ ಕೇಡರ್ನ ಸೋಂಕಿತ ಐಎಎಸ್ ಅಧಿಕಾರಿ ಸೇರಿದಂತೆ ಇತರ ಸೋಂಕಿತರಿಗೆ ಹೋಲಿಸಿಕೊಂಡರೆ, ಶೀಘ್ರ ಗುಣಮುಖರಾದ ತಮ್ಮನ್ನು ಅದೃಷ್ಟಶಾಲಿ ಎಂದು ಅವದ್ ಬಣ್ಣಿಸಿದ್ದಾರೆ. ಇತರ ಸೋಂಕಿತರ ಚಿಕಿತ್ಸೆಗೆ ವಿದೇಶದಿಂದ ಔಷಧಗಳನ್ನು ತರಿಸಲಾಯಿತು. ಪ್ಲಾಸ್ಮಾ ತೆರಪಿ ಮಾಡಲಾಯಿತು ಎಂದು ಅವರು ಹೇಳಿದರು.</p>.<p>ಭಾರಿ ಪ್ರಮಾಣದಲ್ಲಿ ಕುಸಿದಿದ್ದ ತಮ್ಮ ಹಿಮೋಗ್ಲೋಬಿನ್ ಮಟ್ಟವು ಸದ್ಯ ಏರಿಕೆಯಾಗಿದೆ. ಅಲ್ಲದೆ, ಆಹಾರದ ವಿಚಾರದಲ್ಲಿ ಈಗ ಅತ್ಯಂತ ಎಚ್ಚರಿಕೆಯಿಂದ ಇರುವುದಾಗಿಯೂ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>