ಬೆಂಕಿ ಕಾಣಿಸಿಕೊಂಡಿದ್ದ ವೇಳೆಯಲ್ಲಿಯೇ ಸಿಧು ಅವರು ಆಸ್ಪತ್ರೆಯ ಸಮೀಪ ಹೋಗುತ್ತಿದ್ದರು. ತನ್ನ ಬೈಕ್ ಅನ್ನು ನಿಲ್ಲಿಸಿದ ಅವರು ರಕ್ಷಣಾ ಕಾರ್ಯಕ್ಕೆ ಅಗ್ನಿಶಾಮಕ ಸಿಬ್ಬಂದಿ ಜತೆ ಕೈಜೋಡಿಸಲು ಮನವಿ ಮಾಡಿದರು. ಅವರ ಒಪ್ಪಿಗೆ ಪಡೆದು ಬೆಂಕಿ ಕಾಣಿಸಿಕೊಂಡಿದ್ದ ನಾಲ್ಕನೇ ಮಹಡಿಗೆ ಅಗ್ನಿಶಾಮಕ ಸಿಬ್ಬಂದಿಯ ಏಣಿ ಸಹಾಯದಿಂದ ಏರಿದ್ದರು. ಅಲ್ಲಿ ಸಿಲುಕಿಕೊಂಡಿದ್ದ ರೋಗಿಗಳು ಮತ್ತು ಆಸ್ಪತ್ರೆಗೆ ಬಂದಿದ್ದವರನ್ನು ಅವರು ರಕ್ಷಿಸಿದರು.