ಅಕ್ರಮ ಮರಳು ಸಾಗಣೆ ಆರೋಪದಲ್ಲಿನ ಇಲ್ಲಿನ ಪುಷ್ಪೇಂಧರ ಯಾದವ್ ಎಂಬ ಯುವಕನನ್ನು ಪೊಲೀಸರು ಭಾನುವಾರ ಎನ್ಕೌಂಟರ್ನಲ್ಲಿ ಕೊಂದಿದ್ದರು. ಈ ಎನ್ಕೌಂಟರ್ಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಪುಷ್ಪೇಂಧರ ಅವರ ಕುಟುಂಬದ ಸದಸ್ಯರನ್ನು ಅಖೀಲೇಶ್ ಗುರುವಾರ ಭೇಟಿ ಮಾಡಿದ್ದರು. ಭೇಟಿಯ ನಂತರ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪರಿ ಇದು.