ನವದೆಹಲಿ:ಕಚೇರಿ ಖಾಲಿ ಮಾಡಬೇಕು ಎಂಬ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ನ್ಯಾಷನಲ್ ಹೆರಾಲ್ಡ್ನ ಪ್ರಕಾಶನ ಸಂಸ್ಥೆ ಅಸೋಸಿಯೇಟೆಡ್ ಜರ್ನಲ್ಸ್ ಸಲ್ಲಿಸಿದ್ದ ಮನವಿ ಸಂಬಂಧ ದೆಹಲಿ ಹೈಕೋರ್ಟ್ ಗುರುವಾರ ತೀರ್ಪು ಪ್ರಕಟಿಸಲಿದೆ.
ನ್ಯಾಯಮೂರ್ತಿಗಳಾದ ರಾಜೇಂದ್ರ ಮೆನನ್ ಮತ್ತು ವಿ.ಕೆ.ರಾವ್ ಅವರನ್ನು ಒಳಗೊಂಡ ಪೀಠ ಫೆ.18ರಂದು ಆದೇಶವನ್ನು ಕಾದಿರಿಸಿತು.