ರಾಯಪುರ/ನವದೆಹಲಿ:ಛತ್ತೀಸಗಡದ ದಾಂತೇವಾಡ ಜಿಲ್ಲೆಯಲ್ಲಿ ಸೋಮವಾರ ನಕ್ಸಲರು ನಡೆಸಿದ ದಾಳಿಯಲ್ಲಿ ಸಿಆರ್ಪಿಎಫ್ ಯೋಧರೊಬ್ಬರು ಸಾವನ್ನಪ್ಪಿದ್ದಾರೆ. ಐವರು ಯೋಧರು ಗಾಯಗೊಂಡಿದ್ದಾರೆ.
ಕೊಂಡಪಾರಾ ಮತ್ತು ಕಮಪಾಪುರ ಗ್ರಾಮಗಳ ನಡುವಿನ ಅರಣ್ಯಪ್ರದೇಶದಲ್ಲಿ ಸಿಆರ್ಪಿಎಫ್ನ 231ನೇ ಬೆಟಾಲಿಯನ್ ಯೋಧರು ವಾಹನದಲ್ಲಿ ತೆರಳುತ್ತಿದ್ದಾಗಸುಧಾರಿತ ಸ್ಫೋಟಕಗಳನ್ನು ಬಳಸಿ ನಕ್ಸಲರು ದಾಳಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.