<p><strong>ಲಖನೌ:</strong> ದೀರ್ಘ ಕಾಲ ಬಿಜೆಪಿಯಲ್ಲಿದ್ದು ಕಾಂಗ್ರೆಸ್ ಪಕ್ಷಕ್ಕೆ ಇತ್ತೀಚೆಗೆ ಸೇರ್ಪಡೆಯಾದ ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಅವರನ್ನು ಬಿಹಾರದ ಪಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಕಣಕ್ಕಿಳಿಸಿದೆ. ಆದರೆ, ಅವರ ಹೆಂಡತಿ ಪೂನಂ ಸಿನ್ಹಾ ಅವರು ಎಸ್ಪಿ ಸೇರಿದ್ದಾರೆ.</p>.<p>ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ವಿರುದ್ಧ ಲಖನೌ ಕ್ಷೇತ್ರದಿಂದ ಅವರನ್ನು ಎಸ್ಪಿ ಕಣಕ್ಕಿಳಿಸಿದೆ. ಆಚಾರ್ಯ ಪ್ರಮೋದ್ ಕೃಷ್ಣಂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ. ಹೀಗಾಗಿ, ಇಲ್ಲಿ ಈಗ ಯಾರನ್ನು ಬೆಂಬಲಿಸಬೇಕು ಎಂಬ ಗೊಂದಲದಲ್ಲಿ ಶತ್ರುಘ್ನ ಇದ್ದಾರೆ.</p>.<p>ನಾಮಪತ್ರ ಸಲ್ಲಿಸುವ ಮೊದಲು ಪೂನಂ ಅವರು ಭಾರಿ ರೋಡ್ಷೋವನ್ನು ಲಖನೌದಲ್ಲಿ ಗುರುವಾರ ನಡೆಸಿದರು. ಈ ರೋಡ್ಷೋದಲ್ಲಿ ಶತ್ರುಘ್ನ ಅವರೂ ಇದ್ದರು. ಇದನ್ನು ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಂ ವಿರೋಧಿಸಿದ್ದಾರೆ. ಶತ್ರುಘ್ನ ಅವರು ಪಕ್ಷದ ಬದಲು ಹೆಂಡತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಅವರು ದೂರಿದ್ದಾರೆ.</p>.<p>‘ಶತ್ರುಘ್ನ ಅವರು ಪಕ್ಷದ ಪರವಾಗಿಪ್ರಚಾರ ಮಾಡಬೇಕು. ಅವರು ಪಕ್ಷ ಧರ್ಮವನ್ನು ಪಾಲಿಸಬೇಕು’ ಎಂದು ಕೃಷ್ಣಂ ಹೇಳಿದ್ದಾರೆ.</p>.<p>ನಟ ಶತ್ರುಘ್ನ ಅವರು ರೋಡ್ಷೋದಲ್ಲಿ ಭಾಗವಹಿಸಿದ್ದಷ್ಟೇ ಅಲ್ಲದೆ ಜನರತ್ತ ಕೈಬೀಸಿದರು. ಶತ್ರುಘ್ನ ಅವರನ್ನು ನೋಡುವುದಕ್ಕಾಗಿಯೇ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು.</p>.<p>ರೋಡ್ಷೋದಲ್ಲಿ ಭಾಗವಹಿಸಿದ್ದನ್ನು ಶತ್ರುಘ್ನ ಸಮರ್ಥಿಸಿಕೊಂಡಿದ್ದಾರೆ. ಗಂಡನಾಗಿ ಅಲ್ಲಿ ಹೋಗಿದ್ದೇನೆಯೇ ಹೊರತು ಕಾಂಗ್ರೆಸ್ ಮುಖಂಡನಾಗಿ ಅಲ್ಲ ಎಂದು ಅವರು ಹೇಳಿದ್ದಾರೆ.</p>.<p>ಉತ್ತರ ಪ್ರದೇಶ ರಾಜ್ಯ ಕಾಂಗ್ರೆಸ್ ಘಟಕದ ಮುಖಂಡರಿಗೂ ಶತ್ರುಘ್ನ ಅವರ ನಡೆಯಿಂದ ಬೇಸರವಾಗಿದೆ.</p>.<p>‘ನಮ್ಮ ಅಭ್ಯರ್ಥಿ ಒಂದೆರಡು ದಿನಗಳಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ನಮ್ಮ ರೋಡ್ಷೋದಲ್ಲಿಯೂ ಶತ್ರುಘ್ನ ಭಾಗವಹಿಸುತ್ತಾರೆಯೇ’ ಎಂದು ಉತ್ತರ ಪ್ರದೇಶ ಕಾಂಗ್ರೆಸ್ನ ಮುಖಂಡರೊಬ್ಬರು ಪ್ರಶ್ನಿಸಿದ್ದಾರೆ.</p>.<p><strong>ಹೈಕಮಾಂಡ್ಗೆ ದೂರು ಸಾಧ್ಯತೆ</strong></p>.<p>ಎಸ್ಪಿ ಅಭ್ಯರ್ಥಿಯ ರೋಡ್ಷೋದಲ್ಲಿ ಶತ್ರುಘ್ನ ಅವರು ಭಾಗವಹಿಸಿದ್ದನ್ನು ಹೈಕಮಾಂಡ್ ಗಮನಕ್ಕೆ ತರಲಾಗುವುದು ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಹೆಂಡತಿ ಪೂನಂ ಅವರ ಪರ ರ್ಯಾಲಿಗಳಲ್ಲಿ ಶತ್ರುಘ್ನ ಅವರು ಭಾಗವಹಿಸದಂತೆ ಸೂಚಿಸಲು ಹೈಕಮಾಂಡ್ ಅನ್ನು ಕೋರಲಾಗುವುದು ಎಂದೂ ಅವರು ತಿಳಿಸಿದ್ದಾರೆ.</p>.<p>‘ಎಸ್ಪಿ ನಮ್ಮ ಪ್ರತಿಸ್ಪರ್ಧಿ ಪಕ್ಷ. ಪೂನಂ ಅವರ ರ್ಯಾಲಿಯಲ್ಲಿ ಭಾಗವಹಿಸಿ ಶತ್ರುಘ್ನ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸಬೇಕಾಗುತ್ತದೆ. ಇಲ್ಲವೇ ಎಸ್ಪಿ ಮುಖಂಡರು ಕಾಂಗ್ರೆಸ್ ಪಕ್ಷವನ್ನು ದೂರುವಾಗ ಸುಮ್ಮನೆ ಇರಬೇಕಾಗುತ್ತದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.</p>.<p>***</p>.<p>ಹೆಂಡತಿಗೆ ಬೆಂಬಲ ನೀಡುವುದರಲ್ಲಿ ಯಾವ ತಪ್ಪೂ ಇಲ್ಲ. ಬೇರೆ ಯಾವುದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ನಾನು ಪ್ರಚಾರ ಮಾಡುವುದೇ ಇಲ್ಲ</p>.<p><strong>–ಶತ್ರುಘ್ನ ಸಿನ್ಹಾ, ಕಾಂಗ್ರೆಸ್ ಮುಖಂಡ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ದೀರ್ಘ ಕಾಲ ಬಿಜೆಪಿಯಲ್ಲಿದ್ದು ಕಾಂಗ್ರೆಸ್ ಪಕ್ಷಕ್ಕೆ ಇತ್ತೀಚೆಗೆ ಸೇರ್ಪಡೆಯಾದ ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಅವರನ್ನು ಬಿಹಾರದ ಪಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಕಣಕ್ಕಿಳಿಸಿದೆ. ಆದರೆ, ಅವರ ಹೆಂಡತಿ ಪೂನಂ ಸಿನ್ಹಾ ಅವರು ಎಸ್ಪಿ ಸೇರಿದ್ದಾರೆ.</p>.<p>ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ವಿರುದ್ಧ ಲಖನೌ ಕ್ಷೇತ್ರದಿಂದ ಅವರನ್ನು ಎಸ್ಪಿ ಕಣಕ್ಕಿಳಿಸಿದೆ. ಆಚಾರ್ಯ ಪ್ರಮೋದ್ ಕೃಷ್ಣಂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ. ಹೀಗಾಗಿ, ಇಲ್ಲಿ ಈಗ ಯಾರನ್ನು ಬೆಂಬಲಿಸಬೇಕು ಎಂಬ ಗೊಂದಲದಲ್ಲಿ ಶತ್ರುಘ್ನ ಇದ್ದಾರೆ.</p>.<p>ನಾಮಪತ್ರ ಸಲ್ಲಿಸುವ ಮೊದಲು ಪೂನಂ ಅವರು ಭಾರಿ ರೋಡ್ಷೋವನ್ನು ಲಖನೌದಲ್ಲಿ ಗುರುವಾರ ನಡೆಸಿದರು. ಈ ರೋಡ್ಷೋದಲ್ಲಿ ಶತ್ರುಘ್ನ ಅವರೂ ಇದ್ದರು. ಇದನ್ನು ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಂ ವಿರೋಧಿಸಿದ್ದಾರೆ. ಶತ್ರುಘ್ನ ಅವರು ಪಕ್ಷದ ಬದಲು ಹೆಂಡತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಅವರು ದೂರಿದ್ದಾರೆ.</p>.<p>‘ಶತ್ರುಘ್ನ ಅವರು ಪಕ್ಷದ ಪರವಾಗಿಪ್ರಚಾರ ಮಾಡಬೇಕು. ಅವರು ಪಕ್ಷ ಧರ್ಮವನ್ನು ಪಾಲಿಸಬೇಕು’ ಎಂದು ಕೃಷ್ಣಂ ಹೇಳಿದ್ದಾರೆ.</p>.<p>ನಟ ಶತ್ರುಘ್ನ ಅವರು ರೋಡ್ಷೋದಲ್ಲಿ ಭಾಗವಹಿಸಿದ್ದಷ್ಟೇ ಅಲ್ಲದೆ ಜನರತ್ತ ಕೈಬೀಸಿದರು. ಶತ್ರುಘ್ನ ಅವರನ್ನು ನೋಡುವುದಕ್ಕಾಗಿಯೇ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು.</p>.<p>ರೋಡ್ಷೋದಲ್ಲಿ ಭಾಗವಹಿಸಿದ್ದನ್ನು ಶತ್ರುಘ್ನ ಸಮರ್ಥಿಸಿಕೊಂಡಿದ್ದಾರೆ. ಗಂಡನಾಗಿ ಅಲ್ಲಿ ಹೋಗಿದ್ದೇನೆಯೇ ಹೊರತು ಕಾಂಗ್ರೆಸ್ ಮುಖಂಡನಾಗಿ ಅಲ್ಲ ಎಂದು ಅವರು ಹೇಳಿದ್ದಾರೆ.</p>.<p>ಉತ್ತರ ಪ್ರದೇಶ ರಾಜ್ಯ ಕಾಂಗ್ರೆಸ್ ಘಟಕದ ಮುಖಂಡರಿಗೂ ಶತ್ರುಘ್ನ ಅವರ ನಡೆಯಿಂದ ಬೇಸರವಾಗಿದೆ.</p>.<p>‘ನಮ್ಮ ಅಭ್ಯರ್ಥಿ ಒಂದೆರಡು ದಿನಗಳಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ನಮ್ಮ ರೋಡ್ಷೋದಲ್ಲಿಯೂ ಶತ್ರುಘ್ನ ಭಾಗವಹಿಸುತ್ತಾರೆಯೇ’ ಎಂದು ಉತ್ತರ ಪ್ರದೇಶ ಕಾಂಗ್ರೆಸ್ನ ಮುಖಂಡರೊಬ್ಬರು ಪ್ರಶ್ನಿಸಿದ್ದಾರೆ.</p>.<p><strong>ಹೈಕಮಾಂಡ್ಗೆ ದೂರು ಸಾಧ್ಯತೆ</strong></p>.<p>ಎಸ್ಪಿ ಅಭ್ಯರ್ಥಿಯ ರೋಡ್ಷೋದಲ್ಲಿ ಶತ್ರುಘ್ನ ಅವರು ಭಾಗವಹಿಸಿದ್ದನ್ನು ಹೈಕಮಾಂಡ್ ಗಮನಕ್ಕೆ ತರಲಾಗುವುದು ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಹೆಂಡತಿ ಪೂನಂ ಅವರ ಪರ ರ್ಯಾಲಿಗಳಲ್ಲಿ ಶತ್ರುಘ್ನ ಅವರು ಭಾಗವಹಿಸದಂತೆ ಸೂಚಿಸಲು ಹೈಕಮಾಂಡ್ ಅನ್ನು ಕೋರಲಾಗುವುದು ಎಂದೂ ಅವರು ತಿಳಿಸಿದ್ದಾರೆ.</p>.<p>‘ಎಸ್ಪಿ ನಮ್ಮ ಪ್ರತಿಸ್ಪರ್ಧಿ ಪಕ್ಷ. ಪೂನಂ ಅವರ ರ್ಯಾಲಿಯಲ್ಲಿ ಭಾಗವಹಿಸಿ ಶತ್ರುಘ್ನ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸಬೇಕಾಗುತ್ತದೆ. ಇಲ್ಲವೇ ಎಸ್ಪಿ ಮುಖಂಡರು ಕಾಂಗ್ರೆಸ್ ಪಕ್ಷವನ್ನು ದೂರುವಾಗ ಸುಮ್ಮನೆ ಇರಬೇಕಾಗುತ್ತದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.</p>.<p>***</p>.<p>ಹೆಂಡತಿಗೆ ಬೆಂಬಲ ನೀಡುವುದರಲ್ಲಿ ಯಾವ ತಪ್ಪೂ ಇಲ್ಲ. ಬೇರೆ ಯಾವುದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ನಾನು ಪ್ರಚಾರ ಮಾಡುವುದೇ ಇಲ್ಲ</p>.<p><strong>–ಶತ್ರುಘ್ನ ಸಿನ್ಹಾ, ಕಾಂಗ್ರೆಸ್ ಮುಖಂಡ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>