ಚಂಡೀಗಢ: ಪ್ರಧಾನಿ ನರೇಂದ್ರ ಮೋದಿ ಅವರು ಹರಿಯಾಣದ ಗೃಹ ಸಚಿವ ಅನಿಲ್ ವಿಜ್ ಅವರಿಗೆ ಸೋಮವಾರ ಬೆಳಿಗ್ಗೆ ದೂರವಾಣಿ ಕರೆ ಮಾಡಿ ಅವರ ಆರೋಗ್ಯ ಸ್ಥಿತಿ ವಿಚಾರಿಸಿದರು.
ಅನಿಲ್ ಅವರು ತೊಡೆ ಮೂಳೆ ಮುರಿತಕ್ಕಾಗಿ ಮೊಹಾಲಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು.
‘ಪ್ರಧಾನಿ ಕರೆ ಬಳಿಕ ನನ್ನ ಎಲ್ಲಾ ನೋವು ಮಾಯವಾಗಿದೆ’ ಎಂದು ಸಚಿವ ಅನಿಲ್ ಟ್ವೀಟ್ ಮಾಡಿದ್ದಾರೆ. ‘ನನ್ನಂಥ ಸಾಮಾನ್ಯ ಕಾರ್ಯಕರ್ತನ ಬಗೆಗೂ ನೀವು ಇಷ್ಟೊಂದು ಕಾಳಜಿ ವಹಿಸಿದ್ದೀರಿ. ಇದಕ್ಕಾಗಿ ನಾನು ಕೃತಜ್ಞ’ ಎಂದಿದ್ದಾರೆ.
ಸುಮಾರು ಐದು ನಿಮಿಷ ಅವರು ಮಾತನಾಡಿದರು. ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸೂಚಿಸಿದರು ಎಂದು ನಂತರ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
आज सुबह 9.44 बजे जब भारत के प्रधानमंत्री नरेंद्र मोदी जी का मेक्स मोहाली अस्पताल में बाई जांघ की हड्डी टूट जाने के बाद उपचार करवा रहे मेरा हालचल जानने के लिए फोन आया तो सारी पीड़ा दूर हो गई । मुझ जैसे साधारण कार्यकर्ता की भी आप इतनी चिंता करते है आपको कोटि कोटि नमन व धन्यवाद ।
— ANIL VIJ MINISTER HARYANA (@anilvijminister) June 15, 2020