ಮುಂಬೈ: ಪಂಜಾಬ್ ಮತ್ತು ಮಹಾರಾಷ್ಟ್ರ ಬ್ಯಾಂಕ್ನಿಂದ (ಪಿಎಂಸಿ) ಅಮಾನತುಗೊಂಡಿರುವ ವ್ಯವಸ್ಥಾಪಕ ನಿರ್ದೇಶಕ ಜೋಯ್ ಥಾಮಸ್ ಅವರನ್ನು ₹6,500 ಕೋಟಿ ವಂಚನೆ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಮುಂಬೈಯಲ್ಲಿನ ಆರ್ಥಿಕ ಅಪರಾಧ ದಳಹೇಳಿದೆ.
Pranay Ashok, Public Relation Officer of Mumbai Police: Joy Thomas, Managing Director of PMC Bank who was missing has been arrested today. He is being interrogated and further investigation is underway. pic.twitter.com/IqXq2DhziN
ಮುಂಬೈ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಎಚ್ಡಿಐಎಲ್ನ ಪ್ರವರ್ತಕರು ಮತ್ತು ಬ್ಯಾಂಕ್ನ ಮಾಜಿ ಅಧ್ಯಕ್ಷರಿಗೆ ಸಂಪರ್ಕವಿರುವ 6 ಸ್ಥಳಗಳಲ್ಲಿಜಾರಿ ನಿರ್ದೇಶನಾಲಯ ಶುಕ್ರವಾರಶೋಧ ನಡೆಸಿತ್ತು.
ಎಚ್ಡಿಐಎಲ್ನ ಹಿರಿಯ ಕಾರ್ಯ ನಿರ್ವಾಹಕರಾದ ರಾಕೇಶ್ ವಧವಾನ್ ಮತ್ತು ಸಾರಂಗ್ ವಧವಾನ್ ಅವರನ್ನು ಪೊಲೀಸರು ಅಕ್ಟೋಬರ್ 9ರ ವರೆಗೆ ಬಂಧನದಲ್ಲಿರಿಸಿದ್ದಾರೆ.
ದಿವಾಳಿಯಾಗಿರುವ ಎಚ್ಡಿಐಎಲ್ಗೆ ಪಿಎಂಸಿ ಬ್ಯಾಂಕ್ ತಮ್ಮ ಶೇ. 75 ರಷ್ಟು ಸಾಲವನ್ನು ನೀಡಿತ್ತು. ಎಚ್ಡಿಐಎಲ್ ಪ್ರವರ್ತಕರು ಸಾಲ ಪಡೆಯುವುದಕ್ಕಾಗಿ 21,000 ನಕಲಿ ಖಾತೆಗಳನ್ನು ಸೃಷ್ಟಿಸಿದ್ದರು ಎಂಬ ಆರೋಪವಿದೆ.
ರಿಯಲ್ ಎಸ್ಟೇಟ್ ಸಂಸ್ಠೆಯಾದ ಎಚ್ಡಿಐಎಲ್ಗೆ ಸಾಲ ನೀಡಿದ್ದರೂ ವಾರ್ಷಿಕ ವರದಿಯಲ್ಲಿ ಪಿಎಂಸಿ ಈ ಬಗ್ಗೆ ಉಲ್ಲೇಖಿಸಿರಲಿಲ್ಲ. ಎಚ್ಡಿಐಎಲ್ ದಿವಾಳಿಯಾಗುತ್ತಿದ್ದರೂ ಪಿಎಂಸಿ ಬ್ಯಾಂಕ್ ಸಾಲ ಕೊಡುತ್ತಲೇ ಇತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.