’ಕೇರಳದ ಮುಖ್ಯಮಂತ್ರಿ ಏನು ಹೇಳಿದ್ದರು ಎನ್ನುವುದನ್ನು ಎಡಪಕ್ಷಗಳು ಅರಿತುಕೊಳ್ಳಬೇಕಾಗಿತ್ತು. ಕೇರಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ತೀವ್ರವಾದಿಗಳು ಸಹ ಪಾಲ್ಗೊಂಡಿದ್ದಾರೆ. ಇವರ ವಿರುದ್ಧ ಕ್ರಮಕೈಗೊಳ್ಳುವುದಾಗಿಯೂ ಹೇಳಿದ್ದರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ, ಸಿಎಎಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅವರು ಈ ರೀತಿ ಹೇಳಿರಲಿಲ್ಲ. ಇದು ದಾರಿ ತಪ್ಪಿಸುವುದಾಗಿದೆ’ ಎಂದು ವಿಶ್ವಂ ಹೇಳಿದ್ದಾರೆ.