ನಿಳಕಲ್ ಮತ್ತು ಪಂಬಾ ಇನ್ನಿತರ ಪ್ರದೇಶಗಳಲ್ಲಿ ಅಹಿತಕರ ಘಟನೆ ನಡೆದಿರುವ ಬಗ್ಗೆ ವರದಿಯಾಗಿಲ್ಲ. ಇನ್ನು ಏರುಮೇಲಿಯಲ್ಲಿ ಮುಂಜಾನೆಯಿಂದ ಅಯ್ಯಪ್ಪನ ಭಕ್ತಾಧಿಗಳು ಮಂತ್ರಗಳನ್ನು ಪಠಿಸುತ್ತಿದ್ದು, ರಸ್ತೆಗಳು ಭಕ್ತರಿಂದ ತುಂಬಿ ಹೋಗಿದೆ. ಮೂಲ ಶಿಬಿರಕ್ಕೆ ಉದ್ದೇಶಪೂರ್ವಕವಾಗಿ ಬಸ್ಸ್ಗಳ ಸಂಚಾರವನ್ನು ತಡವಾಗಿ ಆರಂಭಿಸಲಾಗಿದೆ ಎಂದು ರಾಜ್ಯ ಸಾರಿಗೆ ಸಮಿತಿ ಹೇಳಿದೆ.