ಕೊಲ್ಕತ್ತ: ಪಶ್ಚಿಮ ಬಂಗಾಳದ ಪ್ರಬಲ ಪಕ್ಷವಾದ ತೃಣ ಮೂಲ ಕಾಂಗ್ರೆಸ್ (ಟಿಎಂಸಿ) 21ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ.
ಈ ವೇಳೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪಕ್ಷದ ಶ್ರೇಯಸ್ಸಿಗೆ ಶ್ರಮಿಸುತ್ತಿರುವ ಕಾರ್ಯಕರ್ತರಿಗೆ ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ.
ಸಾಕಷ್ಟು ಹೋರಾಟಗಳ ನಡುವೆಯೇ ಜನವರಿ 1, 1988ರಲ್ಲಿ ಟಿಎಂಸಿ ಪಕ್ಷದ ಪಯಣ ಶುರುವಾಯಿತು. ಜನರ ಒಳಿತಿಗಾಗಿ ಎಲ್ಲಾ ಹೋರಾಟಗಳನ್ನು ಎದುರಿಸಿ ದೃಢವಾಗಿ ನಿಂತೆವು. #ತೃಣಮೂಲ21 ಎಂದು ಟ್ವೀಟ್ ಮಾಡಿದ್ದಾರೆ.
Today @AITCofficial turns 21. The journey which began on January 1, 1998 has been full of struggles, but we have been steadfast in our resolve to fight for the people #Trinamool21 1/2
ತೃಣಮೂಲ ಕಾಂಗ್ರೆಸ್ನ ಧ್ಯೇಯವಾದ ತಾಯಿ, ಮಣ್ಣು, ಜನ (mother, soil and the people) ಇವುಗಳನ್ನು ಉಲ್ಲೇಖಿಸಿ ಮಾತನಾಡಿದ ಬ್ಯಾನರ್ಜಿ, ಪಕ್ಷದ ಬೆಂಬಲಕ್ಕಾಗಿ ವರ್ಷಪೂರ್ತಿ ಅವಿರತವಾಗಿ ಶ್ರಮಿಸುತ್ತಿರುವ ಪಕ್ಷದ ಕಾರ್ಯಕರ್ತರಿಗೆ ನನ್ನಧನ್ಯವಾದಗಳು ಎಂದು ಹೇಳಿದ್ದಾರೆ.
ಈ ಪ್ರಯುಕ್ತ ಮಂಗಳವಾರ ರಾಜ್ಯದಾದ್ಯಂತ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.