ವಿಶ್ವಸಂಸ್ಥೆ : ‘ವಿಶ್ವಸಂಸ್ಥೆಯ ಸ್ವಯಂ ನಿರ್ಧಾರ ಕುರಿತ ಜನರ ಹಕ್ಕು ಕುರಿತ ಕಾರ್ಯಸೂಚಿಯಲ್ಲಿ ಎಂದಿಗೂ ಜಮ್ಮು ಮತ್ತು ಕಾಶ್ಮೀರ ವಿಷಯ ಇರಲೇ ಇಲ್ಲ‘ ಎಂದು ಭಾರತ ಪ್ರತಿಪಾದಿಸಿದೆ.
ಗಡಿ ಕುರಿತ ಹಪಾಹಪಿಯಿಂದ ಪಾಕಿಸ್ತಾನ ವಿನಾಕಾರಣ ಈ ಅಂಶ ಉಲ್ಲೇಖಿಸುತ್ತಿದೆ ಎಂದೂ ತರಾಟೆಗೆ ತೆಗೆದುಕೊಂಡಿದೆ. ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ ಸಮಿತಿ ಎದುರು ಇಸ್ಲಾಮಾಮಾದ್ ಮಂಡಿಸಿದ ವಾದಕ್ಕೆ ಪ್ರತಿಯಾಗಿ ಭಾರತ ಹೀಗೆ ಪ್ರತ್ಯುತ್ತರ ನೀಡಿದೆ.
ಅಧಿಕಾರದಿಂದ ನಿರ್ಗಮಿಸುತ್ತಿರುವ ಪಾಕಿಸ್ತಾನದ ವಿಶ್ವಸಂಸ್ಥೆಯ ರಾಯಭಾರಿ ಮಲೀಹಾ ಲೋಧಿ ಸಮಿತಿಯ ಎದುರು ಕಾಶ್ಮೀರ ವಿಷಯ ಪ್ರಸ್ತಾಪಿಸಿದ್ದರು.