ಎಲ್ಗರ್ ಪರಿಷದ್–ಭೀಮ ಕೋರೆಗಾವ್ ಪ್ರಕರಣದ ವಿಚಾರಣೆ ಬುಧವಾರ ನಡೆದ ವೇಳೆ, ‘ವಾರ್ ಅಂಡ್ ಪೀಸ್‘ ಪುಸ್ತಕದಂತಹ ಆಕ್ಷೇಪಾರ್ಹ ಪುಸ್ತಕವನ್ನು ಇರಿಸಿಕೊಂಡಿರುವುದರ ಬಗ್ಗೆ ವಿವರಣೆ ನೀಡಲು ಆರೋಪಿ ವೆರ್ನಾನ್ ಗೋನ್ಸಾಲ್ವಿಸ್ಗೆ ಏಕಸದಸ್ಯ ಪೀಠದನ್ಯಾಯಮೂರ್ತಿ ಸಾರಂಗ್ ಕೋತ್ವಾಲ್ ಸೂಚಿಸಿದ್ದರು.ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ರಮೇಶ್, ‘ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಈ ರೀತಿ ಪ್ರಶ್ನಿಸಿರುವುದು ದಿಗ್ಭ್ರಮೆಗೊಳಿಸಿದೆ. ಇದು ಜಗತ್ತಿನ ಶ್ರೇಷ್ಠ ಕೃತಿಗಳಲ್ಲೊಂದು. ಮಹಾತ್ಮಗಾಂಧಿಯವರ ಮೇಲೆ ಟಾಲ್ಸ್ಟಾಯ್ ಪ್ರಭಾವ ಬೀರಿದ್ದರು.ನವ ಭಾರತಕ್ಕೆ ಸ್ವಾಗತ!’ ಎಂದಿದ್ದಾರೆ.