ಮುಖ್ಯಮಂತ್ರಿ ಆಯ್ಕೆಗೆಂದೇ ಕೇಂದ್ರ ಸಚಿವ ನಿತಿನ ಗಡ್ಕರಿ ನೇತೃತ್ವದಲ್ಲಿ ಗೋವಾ ಬಿಜೆಪಿ ಮುಖಂಡರ ಸಭೆ ಭಾನುವಾರ ರಾತ್ರಿ ನಡೆಯಿತು. ತಡರಾತ್ರಿ 2 ಗಂಟೆಯವರೆಗೂ ನಡೆದ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿಯಾರುಎಂಬ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಆದರೂ ನಿತನ್ ಗಡ್ಕರಿ ಇಂದು ಸಂಜೆಯ ವೇಳೆಗೆ ಮುಖ್ಯಮಂತ್ರಿ ಅಭ್ಯರ್ಥಿಯನ್ನ ಆಯ್ಕೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ, ಮನೋಹರ್ ಪರ್ರೀಕರ್ ಅಂತ್ಯಸಂಸ್ಕಾರ ನಡೆಯುತ್ತಿರುವ ಕಾರಣ ಮುಖ್ಯಮಂತ್ರಿ ಅಭ್ಯರ್ಥಿಯ ಪ್ರಕಟಣೆ ಸಾಧ್ಯವಾಗಿಲ್ಲ.