ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಹ್ಲು ಖಾನ್‌ ಹತ್ಯೆ ಪ್ರಕರಣ: ಸಾಕ್ಷಿಗಳ ಮೇಲೆ ಗುಂಡಿನ ದಾಳಿ

Last Updated 29 ಸೆಪ್ಟೆಂಬರ್ 2018, 19:44 IST
ಅಕ್ಷರ ಗಾತ್ರ

ಜೈಪುರ: ಕಳೆದ ವರ್ಷ ಗೋ ರಕ್ಷಕರಿಂದ ಹತ್ಯೆಯಾದ ಪೆಹ್ಲು ಖಾನ್‌ ಅವರ ಪುತ್ರರು ಹಾಗೂ ಸಾಕ್ಷಿಗಳ ಮೇಲೆ ಅಪರಿಚಿತರ ಗುಂಪೊಂದು ಶನಿವಾರ ಗುಂಡಿನ ದಾಳಿ ನಡೆಸಿದೆ.

ವಕೀಲರ ಜತೆ ಕಾರಿನಲ್ಲಿ ಬೆಹರೋರ್‌ಗೆ ಹೊರಟಿದ್ದ ಪೆಹ್ಲು ಖಾನ್ ಅವರ ಇಬ್ಬರು ಪುತ್ರರು ಮತ್ತು ಸಾಕ್ಷಿಗಳನ್ನು ವಾಹನವೊಂದರಲ್ಲಿ ಬಂದ ಅಪರಿಚಿತರ ಗುಂಪು ಅಡ್ಡಗಟ್ಟಿತ್ತು. ಅವರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದಾಗ ಗುಂಡಿನ ದಾಳಿ ನಡೆಸಿದರು ಎಂದು ವಕೀಲ ಅಸದ್‌ ಹಯಾತ್‌ ಹೇಳಿದ್ದಾರೆ.

ಪೆಹ್ಲು ಖಾನ್‌ ಕಳೆದ ವರ್ಷ ಏಪ್ರಿಲ್‌ 1 ರಂದು ಲಾರಿಯಲ್ಲಿ ರಾಜಸ್ತಾನದಿಂದ ಹರಿಯಾಣಕ್ಕೆ ಗೋವುಗಳನ್ನು ಸಾಗಿಸುತ್ತಿದ್ದಾಗ ಗೋ ರಕ್ಷಕರ ಗುಂಪು ಅವರ ಮೇಲೆ ದಾಳಿ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT