‘ಇದು ನಕಲಿ ದಾಳಿಯಾಗಿದ್ದು, ಸ್ವತಃ ಮಹಿಳೆಯೇ ತನ್ನ ಮೇಲೆ ಇಂತಹ ದಾಳಿ ನಡೆಯುವಂತೆ ಯೋಜನೆ ರೂಪಿಸಿಕೊಂಡಿದ್ದರು ಎಂದು ತಿಳಿದುಬಂದಿದೆ. ದೂರು ನೀಡಿದ್ದಕ್ಕಾಗಿಯೇ ತನ್ನ ಮೇಲೆ ದಾಳಿಯಾಗಿದೆ ಎಂದು ತೋರಿಸುವುದು ಅವರ ಉದ್ದೇಶವಾಗಿತ್ತು’ ಎಂದು ಪ್ರಕರಣದ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಈ ವೇಳೆ ಹೇಳಿದೆ. ‘ಪೊಲೀಸರು ವಿಚಾರಣೆ ನಡೆಸಿದ ರೀತಿ ಸರಿಯಾಗಿಲ್ಲ. ನ್ಯಾಯಯುತ ತನಿಖೆಯಾಗಬೇಕು’ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.