ಮುಂಗಾರು ಹಂಗಾಮಿನ ಹವೀಜದಿಂದ ಹಿಡಿದು ಹಿಂಗಾರು ಹಂಗಾಮಿನ ಧಾನ್ಯಗಳ ಒಕ್ಕಲಿಗೆ ರಸ್ತೆಗಳನ್ನೇ ಅವಲಂಬಿಸಿದ್ದಾರೆ. ಸದ್ಯ ಕುಸುಬಿ ಸುಗ್ಗಿ ಜೋರಾಗಿದೆ. ತಾಲ್ಲೂಕಿನ ಎಲ್ಲ ಗ್ರಾಮಗಳ ರಸ್ತೆಗಳಲ್ಲಿ ಕುಸುಬಿ ರಾಶಿ ಕಾಣುತ್ತಿದೆ. ಕಟಾವು ಮಾಡಿದ ಕುಸುಬಿಯನ್ನು ರೈತರು ವಾಹನ ಸಂಚರಿಸುವ ರಸ್ತೆಗಳಲ್ಲಿ ಹಾಕಿ ಒಕ್ಕಲಿಗೆ ಸರಳ ವಿಧಾನ ಕಂಡುಕೊಂಡಿದ್ದಾರೆ.ಆದರೆ, ಇದರಿಂದ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತಿದೆ. ಕೆಲ ಗ್ರಾಮಗಳಲ್ಲಿ ರಸ್ತೆ ಮಧ್ಯದಲ್ಲಿಯೇ ಒಕ್ಕಲಿಗಾಗಿ ಬೆಳೆಯನ್ನು ರಾಶಿ ಹಾಕಲಾಗುತ್ತಿದೆ. ಕುಸುಬಿ ಜಾರುವ ಗುಣ ಹೊಂದಿದ್ದು, ಇದು ದ್ವಿಚಕ್ರ ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿದೆ. ಕೆಲವು ಬೈಕ್ ಸವಾರರು ಜಾರಿ ಬಿದ್ದು ಕೈ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ ಉದಾಹರಣೆಗಳು ಇವೆ.