ಬಳ್ಳಾರಿ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ನಗರದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಯುವ ವಿಜ್ಞಾನಿಗಳ ಸಮಾವೇಶ ಶನಿವಾರ ಮುಕ್ತಾಯವಾಗಿದ್ದು, ದಾವಣಗೆರೆಯ ನಿಖಿತ ಎಸ್.ರಾಜ್, ಯಾದಗಿರಿಯ ಎಸ್.ಪವನ್, ಮಡಿಕೇರಿಯ ಬಿ.ಸಿ.ಅಭಿಜ್ಞಾನ ಮತ್ತು ಬೀದರ್ನ ಅಪ್ಪು ಗಣೇಶ್ ರಾಜ್ಯ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿಗೆ ಪಾತ್ರರಾದರು.