ತಾಲ್ಲೂಕಿನ ತುಳಸಿಗೇರಿಯ ಕುವೆಂಪು ಮಾದರಿ ಸರ್ಕಾರಿ ಶಾಲೆಯಲ್ಲಿ ಶನಿವಾರ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ ಹಮ್ಮಿಕೊಳ್ಳಲಾಗಿತ್ತು. ಅತಿಥಿಯಾಗಿದ್ದ ಬಾಯಕ್ಕ ಮೇಟಿ, ಬಲೂನು ಊದಿ ಸಮಾರಂಭ ಉದ್ಘಾಟಿಸಲು ಮುಂದಾದರು. ಈ ವೇಳೆ ಬಲೂನಿನ ಒಳಗಿದ್ದ ಶಾಂಪೂ ಹಾಗೂ ಗ್ಲಿಸರಿನ್ ಮಿಶ್ರಣ ಹೊಟ್ಟೆಯೊಳಗೆ ಸೇರಿದೆ. ಇದರಿಂದ ಎಂಟು ಬಾರಿ ವಾಂತಿಯಾಗಿದ್ದು,
ಹೊಟ್ಟೆ ನೋವಿನಿಂದ ಬಳಲಿದ್ದಾರೆ.