ಮೈಸೂರು: ‘ನರೇಂದ್ರ ಮೋದಿ ಇನ್ನೂ ಮೂರು ಬಾರಿ ಪ್ರಧಾನಿಯಾಗಲಿ’ ಎಂದು ಸಾಹಿತಿ ಎಸ್.ಎಲ್.ಭೈರಪ್ಪ ಇಲ್ಲಿ ಮಂಗಳವಾರ ಆಶಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ‘ದೇಶ ಉದ್ಧಾರವಾಗಬೇಕು ಎಂದರೆ ಮೋದಿ ಒಮ್ಮೆ ಪ್ರಧಾನಿಯಾದರೆ ಸಾಲದು. ಲೋಕಸಭೆ, ರಾಜ್ಯಸಭೆಯಲ್ಲಿ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ ಬರಬೇಕು. ಅವರು ಪ್ರಧಾನಿ ಆಗದಿದ್ದಲ್ಲಿ ದೇಶವು ಪಾಕಿಸ್ತಾನ, ಚೀನಾ ಪಾಲಾಗುತ್ತದೆ’ ಎಂದರು.
‘ಕಬ್ಬಿಗೆ ಬೆಂಬಲ ಬೆಲೆ ನೀಡಲೂ ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಇನ್ನು ಕೆಆರ್ಎಸ್ನಲ್ಲಿ ಕಾವೇರಿ ಮಾತೆ ಪ್ರತಿಮೆ ನಿರ್ಮಿಸಲು ಹಣ ಎಲ್ಲಿಂದ ಬರಬೇಕು’ ಎಂದು ಪ್ರಶ್ನಿಸಿದರು.