ಜೆಡಿಎಸ್ನ ಡಾ.ಕೆ.ಅನ್ನದಾನಿ, ‘ನಮ್ಮ ಕಂದಾಯ ಸಚಿವರ ಬಳಿ ಎಂತಹ ಕಾರು ಇದೆ ಎಂಬುದು ಗೊತ್ತಿಲ್ಲ. ಆದರೆ, ಈ ದಲ್ಲಾಳಿಗಳು ಬಿಎಂಡಬ್ಲ್ಯು, ಆಡಿ ಕಾರುಗಳಲ್ಲೇ ಸಂಚಾರ ಮಾಡುತ್ತಾರೆ’ ಎಂದರು.ಬಿಜೆಪಿಯ ಬೆಳ್ಳಿ ಪ್ರಕಾಶ್, ‘ವಿಧಾನಸೌಧ ಹಾಗೂ ವಿಕಾಸಸೌಧದ ಸಚಿವಾಲಯಗಳಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ. ಮೊದಲು ಅವರನ್ನು ಮಟ್ಟ ಹಾಕಿ’ ಎಂದು ಒತ್ತಾಯಿಸಿದರು.