‘ಸಾಮಾಜಿಕ ಕ್ರಾಂತಿ ಮಾಡಿದ ಮಹಾನ್ ನಾಯಕರ ವಿಚಾರಧಾರೆಗಳನ್ನು ಅಲ್ಲಿ ಬೋಧಿಸಲಾಗುವುದು. ಸ್ವಾಮೀಜಿಗಳು, ಚಿಂತಕರು ಹಾಗೂ ಬುದ್ಧಿಜೀವಿಗಳಿಂದ ಉಪನ್ಯಾಸ ಕೊಡಿಸಲಾಗುವುದು. ಪ್ರಗತಿಪರ ಚಿಂತನೆಗಳನ್ನು ಬಿತ್ತಲಾಗುವುದು. ಹಾಸ್ಟೆಲ್, ಗ್ರಂಥಾಲಯ ಸೇರಿ ಇನ್ನಿತರ ವ್ಯವಸ್ಥೆ ಕಲ್ಪಿಸಲಾಗುವುದು’ಎಂದು ಹೇಳಿದರು. ಆದರೆ, ಸ್ಥಳ ಮತ್ತಿತರ ವಿವರ ನೀಡಲಿಲ್ಲ.